Advertisement

ಇಂದು ಕಾಂಗ್ರೆಸ್‌ ಪ್ರತಿಭಟನೆ 

12:30 AM Feb 04, 2019 | Team Udayavani |

ಹೊಸದಿಲ್ಲಿ: ಜ.30ರಂದು ಮಹಾತ್ಮನ ಪುಣ್ಯತಿಥಿಯ ದಿನ ಗಾಂಧೀಜಿಯ ಪ್ರತಿಕೃತಿಗೆ ಗುಂಡಿಕ್ಕಿದ ಹಾಗೂ ಹಂತಕ ನಾಥೂರಾಂ ಗೋಡ್ಸೆ ಭಾವಚಿತ್ರಕ್ಕೆ ಹಾರ ಹಾಕಿದ ಹಿಂದೂ ಮಹಾಸಭಾ ಸದಸ್ಯರ ಕೃತ್ಯವನ್ನು ಖಂಡಿಸಿ ಸೋಮವಾರ ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್‌ ನಿರ್ಧರಿಸಿದೆ.

Advertisement

ಅದರಂತೆ, ದೇಶಾದ್ಯಂತ ಪಕ್ಷದ ಪ್ರಧಾನ ಕಚೇರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಮಾಹಿತಿ ನೀಡಿದ್ದಾರೆ. ಗಾಂಧೀಜಿಯ ಹತ್ಯೆಗೆ ಸಂಬಂಧಿಸಿ ಹಿಂದೂ ಮಹಾಸಭಾ ಮಾಡಿರುವ ಕೃತ್ಯದ ಬಗ್ಗೆ ಕೇಂದ್ರದ ಬಿಜೆಪಿ ಸರಕಾರವು ಮೌನ ವಹಿಸಿರುವುದನ್ನು ನೋಡಿದರೆ, ಅವರು ಇದನ್ನು ಬೆಂಬಲಿಸುತ್ತಾರೆ ಎಂಬಂತೆ ಭಾಸವಾಗುತ್ತಿದೆ ಎಂದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next