Advertisement

ಅಹ್ಮದಾಬಾದ್‌ನ ಫೆ.28ರ ಕಾಂಗ್ರೆಸ್‌ ಸಿಡಬ್ಲ್ಯುಸಿ ಸಭೆ ಮುಂದಕ್ಕೆ

12:00 PM Feb 27, 2019 | Team Udayavani |

ಹೊಸದಿಲ್ಲಿ : ನಾಳೆ ಗುರುವಾರ ಫೆ.28ರಂದು ಅಹ್ಮದಾಬಾದ್‌ ನಲ್ಲಿ ನಡೆಯಲಿಕ್ಕಿದ್ದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯನ್ನು ಗಡಿಯಲ್ಲಿನ ಭದ್ರತಾ ಪರಿಸ್ಥಿತಿಯ ಕಾರಣಕ್ಕೆ ಮುಂದೂಡಲಾಗಿದೆ ಎಂದು ರಣದೀಪ್‌ ಸುರ್‌ಜೇವಾಲಾ ತಿಳಿಸಿದ್ದಾರೆ.

Advertisement

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಅಹ್ಮದಾಬಾದ್‌ ನಲ್ಲಿನ ತಮ್ಮ ಸಾರ್ವಜನಿಕ ಸಭೆಗಳನ್ನು ಕೂಡ ರದ್ದು ಪಡಿಸಿದ್ದಾರೆ ಎಂದವರು ತಿಳಿಸಿದರು. 

ಫೆ.28ರ ಸಿಡಬ್ಲ್ಯುಸಿ ಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ವರಿಷ್ಠರನೇಕರು ಭಾಗವಹಿಸಲಿದ್ದರು ಮತ್ತು ಉನ್ನತ ನೀತಿ ನಿರ್ಧಾರಗಳನ್ನು ಕೈಗೊಳ್ಳುವುದಿತ್ತು ಎನ್ನಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next