Advertisement

ಪೌರತ್ವ ಕಾಯ್ದೆ, ಎನ್ ಆರ್ ಸಿ ಗೆ ಬೆಂಬಲ ಸೂಚಿಸಿದ ಕಾಂಗ್ರೆಸ್ ಶಾಸಕ

09:53 AM Jan 13, 2020 | keerthan |

ಭೋಪಾಲ್: ರಾಷ್ಟ್ರಾದ್ಯಂತ ಕಾಂಗ್ರೆಸ್ ನಿಂದ ವಿರೋಧಿಸಲ್ಪಡುವ ಕೇಂದ್ರ ಸರಕಾರದ ಪೌರತ್ವ ಕಾಯ್ದೆ ಮತ್ತು ಎನ್ ಆರ್ ಸಿಗೆ ಕಾಂಗ್ರೆಸ್ ಶಾಸಕನಿಂದಲೇ ಬೆಂಬಲ ವ್ಯಕ್ತವಾಗಿದೆ. ಮಧ್ಯ ಪ್ರದೇಶದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ದಂಗ್ ಕೇಂದ್ರ ಸರಕಾರದ ಈ ಎರಡು ಯೋಜನೆಗಳಿಂದ ನಷ್ಟವಿಲ್ಲ ಎಂದಿದ್ದಾರೆ.

Advertisement

ಪಾಕಿಸ್ಥಾನ, ಅಫ್ಘಾನಿಸ್ಥಾನ, ಬಾಂಗ್ಲಾದೇಶದಲ್ಲಿರುವ ನಮ್ಮ ಸಹೋದರರು ಇಲ್ಲಿಗೆ ಬಂದರೆ, ಅವರಿಗೆ ಜಾಗ ನೀಡುವುದರಲ್ಲಿ ತಪ್ಪಿಲ್ಲ. ಅವರಿಗೆ ಆ ದೇಶಗಳಲ್ಲಿ ಕಿರುಕುಳವಾಗುತ್ತಿದ್ದರೆ ಅವರು ಭಾರತಕ್ಕೆ ಬರಬಹುದು ಎಂದು ಸುವಾರ್ಸಾ ಕ್ಷೇತ್ರದ ಶಾಸಕರಾಗಿರುವ ಹರ್ದೀಪ್ ಸಿಂಗ್ ದಂಗ್ ಅಭಿಪ್ರಾಯಪಟ್ಟಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಎರಡು ಬೇರೆ ಬೇರೆ. ಅವೆರಡೂ ಜಾರಿಗೆ ಬಂದರೆ ಅದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.

ಹರ್ದೀಪ್ ಸಿಂಗ್ ದಂಗ್ ಈ ಹಿಂದೆಯೂ ತಮ್ಮ ಸ್ವ ಪಕ್ಷಕ್ಕೆ ವಿರೋಧವಾಗಿ ಕೇಂದ್ರ ಸರಕಾರವನ್ನು ಬೆಂಬಲಿಸಿದ್ದರು. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ನ್ನು ತೆರವುಗೊಳಿಸಿದಾಗಲೂ ಅವರು ಬೆಂಬಲ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next