Advertisement

ಕಾಂಗ್ರೆಸ್‌ ಪ್ರಣಾಳಿಕೆ ಉಗ್ರರಿಗೆ ಅನುಕೂಲ

10:16 PM Apr 03, 2019 | Lakshmi GovindaRaju |

ಕೊಪ್ಪಳ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಉಗ್ರರಿಗೆ ಅನುಕೂಲವಾಗುವ ಅಂಶಗಳು ಉಲ್ಲೇಖವಾಗಿವೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಶ್ರೀರಾಮುಲು ಆರೋಪ ಮಾಡಿದರು.

Advertisement

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿನ ಮೈತ್ರಿ ಸರ್ಕಾರ ಪತನವಾಗಲಿದೆ. ಬಿಜೆಪಿಯ ಕಮಲ ರಾಜ್ಯದಲ್ಲಿ ಅರಳಲಿದ್ದು, ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ರಾಹುಲ್‌ ಪ್ರಧಾನಿಯಾಗಲು ಅರ್ಹ ವ್ಯಕ್ತಿಯಲ್ಲ. ರಾಹುಲ್‌ಗೆ ಈಗ ರೈತರ ನೆನಪಾಗಿದೆ.

ರಾಜ್ಯದಲ್ಲಿ ಎರಡು ಕಳ್ಳೆತ್ತುಗಳು ಕೂಡಿ ಸರ್ಕಾರ ನಡೆಸುತ್ತಿವೆ. ಸಿಎಂ ಕುಮಾರಸ್ವಾಮಿಗೆ ಮಂಡ್ಯ ಸೇರಿ ಇತರೆಡೆ ಸೋಲಿನ ಭಯ ಕಾಡುತ್ತಿದೆ ಎಂದರು. ಮಂಡ್ಯದಲ್ಲಿ ಶಿವರಾಮೇಗೌಡ ಅವರು ಸುಮಲತಾ ಅವರು ಗೌಡ್ತಿ ಅಲ್ಲ, ಅವರೊಬ್ಬ ನಾಯ್ಡು ಎಂದಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಸೋನಿಯಾ ಗಾಂಧಿ ಭಾರತೀಯರಲ್ಲ. ಅವರು ವಿದೇಶಿ ಮಹಿಳೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next