Advertisement

ಕಾಂಗ್ರೆಸ್‌-ಜೆಡಿಎಸ್‌ ಸಂಬಂಧ ಸರಿಯಿಲ್ಲ: ಕಾಗೇರಿ

12:30 AM Jan 29, 2019 | |

ಧಾರವಾಡ: ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ದೋಸ್ತಿ ಮೊದಲಿನಿಂದಲೂ ಅಸ್ಥಿರದಲ್ಲೇ ಇದ್ದು, ಸಿಎಂ ಕುಮಾರಸ್ವಾಮಿ ಈ ಅಸ್ಥಿರತೆಯನ್ನು ಈಗ ಹೇಳಿಕೊಂಡಿದ್ದಾರಷ್ಟೇ. ಅವರಿಗೆ ಸಿಎಂ ಸ್ಥಾನ ಬಿಡಲೂ ಆಗುತ್ತಿಲ್ಲ. ಮುಂದುವರಿಯಲೂ ಆಗುತ್ತಿಲ್ಲ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಕಸ್ಮಿಕವಾಗಿ ರಚನೆಯಾಗಿದ್ದು, ಅಪವಿತ್ರ ಮೈತ್ರಿ ಫಲದ ಸರ್ಕಾರ ಇದಾಗಿದೆ. ಅವಕಾಶವಾದಿ ರಾಜಕಾರಣದಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಪಕ್ಷಗಳು ಅಪವಿತ್ರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿವೆ. ಆರಂಭದಿಂದಲೂ ಈ ಸರ್ಕಾರದಲ್ಲಿ ಹೊಂದಾ ಣಿಕೆಯೇ ಇಲ್ಲ. ಆಂತರಿಕ ಕಚ್ಚಾಟ, ಒಳಜಗಳಗಳು ನಡೆದಿವೆ ಎಂದರು.

ನಾವೇನು (ಬಿಜೆಪಿ) ಹೀಗೆ ಜಗಳ ಮಾಡಿ ಎಂದು ಅವರಿಗೆ ಹೇಳಿಲ್ಲ. ಅವರೇ ಈ ಜಗಳಗಳನ್ನು ಸೃಷ್ಟಿ ಮಾಡಿಕೊಳ್ಳುತ್ತಿದ್ದಾರೆ. ಇವರ ಈ ಕಚ್ಚಾಟ ಮುಚ್ಚಿ ಹಾಕಲು ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಜಗಳದಿಂದಲೇ ಈ ಸರ್ಕಾರ ಬೀಳುತ್ತದೆ. ಆಗ ಬಿಜೆಪಿ ಜನಾಭಿಪ್ರಾಯಕ್ಕೆ ಮನ್ನಣೆ ಕೊಡುತ್ತದೆ. ಈ ಮೈತ್ರಿ ಸರ್ಕಾರ ತನ್ನ ಭಾರ ತಾಳಲಾಗದೇ, ತಾನೇ ಬಿದ್ದ ಮೇಲೆ ಬಿಜೆಪಿ ತನ್ನ ಜವಾಬ್ದಾರಿ ನಿರ್ವಹಿಸಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next