Advertisement

ರಾಕ್ಷಸಿ ಕೃತ್ಯ ಸಮರ್ಥಿಸುವುದು ಕಾಂಗ್ರೆಸ್ ಗೆ ಹೊಸದೇನು ಅಲ್ಲ: ಚಕ್ರವರ್ತಿ ಸೂಲಿಬೆಲೆ

04:29 PM Oct 16, 2023 | Team Udayavani |

ದಾವಣಗೆರೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಕ್ಷಸರ ಸಮರ್ಥನೆ ಮಾಡುವುದು ವಿಶೇಷವೇನು ಅಲ್ಲ ಎಂದು ಚಕ್ರವರ್ತಿ ಸೂಲಿಬೆಲೆ ದೂರಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಷ ದಸರಾವನ್ನು ಸಮರ್ಥನೆ ಮಾಡುವ ಹೊತ್ತಿನಲ್ಲಿ ಪಾಲೆಸ್ತೀನ್ ಗೆ ಬೆಂಬಲ ಮಾಡುವುದು ಸಹ ಗೊತ್ತಾಗಿದೆ. ಪಾಲೆಸ್ತೀನ್ ನ ರಾಕ್ಷಸಿ ಕೃತ್ಯಕ್ಕೆ ಇಂಡಿಯಾ ಕೂಟ ಸಹ ಸಮರ್ಥಿಸಿದೆ. ರಾಕ್ಷಸಿ ಕೃತ್ಯ ಸಮರ್ಥನೆ ಮಾಡುವುದು ಕಾಂಗ್ರೆಸ್ ಗೆ ಹೊಸದೇನು ಅಲ್ಲ ಎಂದು ಹರಿಹಾಯ್ದರು.

ಮಹಿಷಾ ದಸರಾಕ್ಕೆ ಆಕ್ಷೇಪಿಸಿ ಮೈಸೂರು ಒಂದಾಗಿ ಪ್ರತಿಭಟನೆಗೆ ಮುಂದಾಗಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.

ನರೇಂದ್ರ ಮೋದಿ ಅವರನ್ನು ಮೂರನೇ ಬಾರಿ ಪ್ರಧಾನಿ ಮಾಡಬೇಕು ಎನ್ನುವ ಉದ್ದೇಶದಿಂದ ನಮೋ ಬ್ರಿಗೇಡ್ ನಿಂದ ಬೈಕ್ ರ್ಯಾಲಿ ಮಾಡಲಾಗುತ್ತಿದೆ. ಬ್ರಿಗೇಡ್ ನಿಂದ ರಾಜ್ಯಾದ್ಯಂತ ಬೈಕ್ ರ್ಯಾಲಿ ನಡೆಸಲಾಗಿದೆ. ಬಹುತೇಕ ಕೊನೆಯ ಹಂತದಲ್ಲಿದ್ದೇವೆ. ಮೂರೂವರೆ ಸಾವಿರ ಕಿಲೋ ಮೀಟರ್ ಬೈಕ್ ರ್ಯಾಲಿ ಮಾಡಿದ್ದೇವೆ. ಕೋಲಾರದಿಂದ ಆರಂಭವಾಗಿದ್ದು, ಬೆಂಗಳೂರಿನಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next