Advertisement

ಸತೀಶಗೆ ಕಾಂಗ್ರೆಸ್‌ ಹೈಕಮಾಂಡ್‌ ಬುಲಾವ್‌

06:45 AM Sep 18, 2018 | |

ಬೆಳಗಾವಿ: ಕಾಂಗ್ರೆಸ್‌ ಪಕ್ಷದ ರಾಜ್ಯ ವಿದ್ಯಮಾನಗಳ ಕುರಿತು ಚರ್ಚಿಸಲು ದೆಹಲಿಗೆ ಬರುವಂತೆ ಶಾಸಕ ಸತೀಶ ಜಾರಕಿಹೊಳಿ ಅವರಿಗೆ ಹೈಕಮಾಂಡ್‌ನಿಂದ ಕರೆ ಬಂದಿದೆ.

Advertisement

ಸತೀಶ ಜಾರಕಿಹೊಳಿ ಅವರಿಗೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ ಕರೆ ಮಾಡಿ ಮಂಗಳವಾರ ಅಥವಾ ಬುಧವಾರ ದೆಹಲಿಗೆ ಬರುವಂತೆ ಸೂಚಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿದ  ಸತೀಶ, ಈ ಭೇಟಿಯಲ್ಲಿ ವಿಶೇಷವೇನೂ ಇಲ್ಲ. ವೇಣುಗೋಪಾಲ ಅವರನ್ನು ಮಾತ್ರ ಭೇಟಿಯಾಗುತ್ತಿಲ್ಲ. ರಾಹುಲ್‌ ಗಾಂಧಿ ಭೇಟಿ ಆಗುವ ಬಗ್ಗೆ ತೀರ್ಮಾನವಾಗಿಲ್ಲ. ರಾಜ್ಯದ ಸಮಸ್ಯೆ ಇತ್ಯರ್ಥ ಪಡಿಸಲು ದಿನೇಶ್‌ಗುಂಡೂರಾವ್‌ ದೆಹಲಿಗೆ ಬರುತ್ತಿದ್ದಾರೆ ಎಂದರು.

ಸಹೋದರ ರಮೇಶ ಜಾರಕಿಹೊಳಿ ಅವರೇ ಸಚಿವರಾಗಿ ಇರುತ್ತಾರೆ. ಸದ್ಯ  ಅವರೊಂದಿಗೆ ಮುಖಾಮುಖೀ ಭೇಟಿಯಾಗಿಲ್ಲ. ಫೋನ್‌ನಲ್ಲಿ ಸಂಭಾಷಣೆ ನಡೆಸಿದ್ದು, ಬೆಂಗಳೂರಿಗೆ ಬಂದು ಚರ್ಚೆ ಮಾಡುವುದಾಗಿ ತಿಳಿಸಿದ್ದೇನೆ. ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಹಾಗೂ ಲೋಕಸಭೆ ಚುನಾವಣೆ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಸಮ್ಮಿಶ್ರ ಸರಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದ್ದೇವೆ. ಕೆಲ ಸಮಸ್ಯೆಗಳ ಕುರಿತು ಚರ್ಚೆಗೆ ಸಿದ್ದರಾಮಯ್ಯ ಅವರನ್ನು ರಮೇಶ ಭೇಟಿಯಾಗುತ್ತಿದ್ದಾರೆ. ಈಗಿನವರೆಗಿನ ಎಲ್ಲ ಸಮಸ್ಯೆಗಳೆಲ್ಲವೂ ಮುಗಿದ ಅಧ್ಯಾಯ ಎಂದು ಸತೀಶ ಹೇಳಿದರು. ಬಿಜೆಪಿಯವರು ದುಡ್ಡು ಕೊಟ್ಟಿದ್ದಾರೆಂದು ನಮ್ಮ ಶಾಸಕರು ಎಲ್ಲಿಯೂ ಹೇಳಿಲ್ಲ. 4 ತಿಂಗಳಿನಿಂದಲೂ ಬಿಜೆಪಿಯವರು ನಮ್ಮ ಶಾಸಕರನ್ನು ಕರೆಯುತ್ತಿದ್ದು, ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನಷ್ಟೇ ಶಾಸಕರು ಹೇಳುತ್ತಿದ್ದಾರೆ. ಈ ವಿಷಯವನ್ನು ಇಲ್ಲಿಗೇ ಮುಗಿಸಿದರೆ ಒಳ್ಳೆಯದು ಎಂದು  ಸತೀಶ ಜಾರಕಿಹೊಳಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next