Advertisement

Congress Government: ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಂದು ಎಚ್‌ಡಿಕೆ ದಾಖಲೆ ಬಿಡುಗಡೆ

01:08 AM Sep 28, 2024 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿರುವ ಕೆಲವು ಹಿರಿಯ ಪೊಲೀಸ್‌ ಅಧಿಕಾರಿಗಳು ದರೋಡೆಕೋರರಾಗಿದ್ದು ಅವರ ಕಾರ್ಯವೈಖರಿ ಕುರಿತು ಶನಿವಾರ ದಾಖಲೆಗಳನ್ನು ಬಿಡುಗಡೆ ಮಾಡಲಿದ್ದು ಆ ನಂತರ ಈ ಸರ್ಕಾರದ ಸಚಿವರು ಮಾತನಾಡಲಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾ ರಸ್ವಾಮಿ ಹೇಳಿದ್ದಾರೆ.

Advertisement

ಲೋಕಾಯುಕ್ತ ಕಚೇರಿಗೆ ಹಾಜರಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಾನೇನು ತಪ್ಪು ಮಾಡಿ ಇಲ್ಲಿಗೆ ಬಂದಿಲ್ಲ. ಸ್ವಯಂಪ್ರೇರಿತವಾಗಿ ಬಂದಿದ್ದೇನೆ. ಶನಿವಾರ ಬೆಳಗ್ಗೆ 11 ಗಂಟೆಗೆ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ. ಇವರ ಆಡಳಿತದಲ್ಲಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಕಚೇರಿ ಹೇಗೆ ಕೆಲಸ ಮಾಡುತ್ತಿದೆ? ಎಂಬುದು ಶನಿವಾರ ಗೊತ್ತಾಗಲಿದೆ ಎಂದರು.

ಮುಖ್ಯಮಂತ್ರಿಗಳ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಯಾರಿಗೂ ಹೆದರಲ್ಲ. ಹೆದರೋ ಜಾಯಮಾನವಲ್ಲ. ಕೋರ್ಟ್‌ನಲ್ಲಿ ಎಫ್ಐಆರ್‌ ಹಾಕುವಂತೆ ತೀರ್ಪು ಕೊಟ್ಟ ನಂತರ 48 ಗಂಟೆಗಳ ಕಾಲ ಎಫ್ಐಆರ್‌ ಹಾಕಿಲ್ಲ. ಕಳೆದ 3-4 ತಿಂಗಳಿಂದ ಡಿಜಿ ಕಚೇರಿಗೆ ಹೆಣ್ಣು ಮಕ್ಕಳುಳನ್ನು ಕರೆಸಿಕೊಂಡು ಅರ್ಜಿ ಬರೆಸಿಕೊಂಡು 24 ಗಂಟೆಯಲ್ಲಿ ಎಫ್ಐಆರ್‌ ಹರಿದು ಯಾವ ರೀತಿ ಕೇಸ್‌ಗಳನ್ನು ಹಾಕಿಕೊಂಡು ಕೆಲಸ ಮಾಡಿಕೊಂಡು ಬಂದಿದ್ದೀರಿ, ಬಿಜೆಪಿ ಮತ್ತು ಜೆಡಿಎಸ್‌ ನನ್ನ ಕಾರ್ಯಕ್ರಮ ಸಹಿಸಿಕೊಳ್ಳಲಾಗದೆ ಸರ್ಕಾರ ತೆಗೆಯಬೇಕು ಎಂದು ಹೇಳಿ ಬಿಜೆಪಿ-ಜೆಡಿಎಸ್‌ ಷಡ್ಯಂತ್ರ ಎಂದು ಪದೇಪದೆ ಹೇಳಲು ನಾಚಿಕೆ ಆಗಬೇಕು ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ನಾನು ಏಕೆ ರಾಜೀನಾಮೆ ಕೊಡಬೇಕು?:
ಬಿಜೆಪಿ ಸರ್ಕಾರ, ನರೇಂದ್ರ ಮೋದಿ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಯಾವ ನೈತಿಕತೆ ಇಟ್ಟುಕೊಂಡಿದ್ದಾರೆ. ಕುಮಾರಸ್ವಾಮಿ ಏಕೆ ರಾಜಿನಾಮೆ ಕೊಟ್ಟಿಲ್ಲ ಎಂದು ಸಾವಿರ ಬಾರಿ ಹೇಳಿರಬಹುದು. ನಾನು ಏಕೆ ರಾಜಿನಾಮೆ ಕೊಡಬೇಕು. ನಾನು ಏನು ಮಾಡಿದ್ದೇನೆ. ಬಂಡತನದಲ್ಲಿ ಸರ್ಕಾರದ ಆಸ್ತಿ ಲೂಟಿ ಮಾಡಿರುವುದು ನೀವು. ನಾನು ಏನೂ ತಪ್ಪೇ ಮಾಡಿಲ್ಲ ಎಂದು ಬಂಡತನದಲ್ಲಿ ಹೊರಟಿದ್ದೀರಿ. ನಾನು ಜಾಮೀನು ತೆಗೆದುಕೊಂಡಿದ್ದೇನೆ. ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳುಹಿಸಬೇಕೆಂದು ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡು ಕುಮಾರಸ್ವಾಮಿ ಕೆಣಕಿದ ನಿಮ್ಮ ದು ಪಾರದರ್ಶಕ ಆಡಳಿತವೇ ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next