Advertisement

ಮತ್ತೆ ವಾದ್ರಾ ಅಕ್ರಮದ ಸದ್ದು

01:51 AM Apr 29, 2017 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಅವರು ನಡೆಸಿದ್ದಾರೆ ಎನ್ನಲಾದ ಭೂ ಅಕ್ರಮದ ಕುರಿತು ತನಿಖೆ ನಡೆಸಿದ್ದ ನಿವೃತ್ತ ನ್ಯಾ| ಧಿಂಗ್ರಾ ಸಮಿತಿ ವರದಿ ಸೋರಿಕೆಯಾಗಿದ್ದು, ಮತ್ತೆ ರಾಜಕೀಯ ಸಂಚಲನ ಮೂಡಿಸಿದೆ. ಈ ವರದಿಯನ್ನು ಹರ್ಯಾಣದಲ್ಲಿರುವ ಬಿಜೆಪಿ ಸರಕಾರವೇ ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಈ ಬಗ್ಗೆ ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಕ್ಷದ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ, ಹರ್ಯಾಣ ಮತ್ತು ಪಂಜಾಬ್‌ ಹೈಕೋರ್ಟ್‌ ಈ ವರದಿಯನ್ನು ಬಿಡುಗಡೆ ಮಾಡದಂತೆ ಎರಡು ಬಾರಿ ಇಂಜಕ್ಷನ್‌ ಕೊಟ್ಟಿದ್ದರೂ ಸೋರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದನ್ನು ಸರಕಾರವೇ ವಾದ್ರಾ ಹೆಸರಿಗೆ ಕಳಂಕ ತರಲು ಸೋರಿಕೆ ಮಾಡಿಸಿದೆ ಎಂದು ಆರೋಪಿಸಿದ್ದಾರೆ.

Advertisement

ಕಾಂಗ್ರೆಸ್‌ನ ಆರೋಪ ತಿರಸ್ಕರಿಸಿರುವ ಹರ್ಯಾಣ ಸರಕಾರ, ಸೋರಿಕೆ ಹೇಗೆ ಆಯ್ತು ಎಂಬುದು ಗೊತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರೂ ಸೋರಿಕೆಯಲ್ಲಿ ಬಿಜೆಪಿ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಬರ್ಟ್‌ ವಾದ್ರಾ ಅವರ ವ್ಯಾಪಾರ, ವಹಿವಾಟಿಗೂ ತಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next