Advertisement

Congress Govt ಸಿಎಂ, ಡಿಸಿಎಂ ಆಯ್ಕೆ ಹೈಕಮಾಂಡ್‌ಗೆ ಬಿಟ್ಟ ವಿಚಾರ: ಸಚಿವ ತಿಮ್ಮಾಪುರ

06:45 PM Jul 01, 2024 | Team Udayavani |

ರಬಕವಿ ಬನಹಟ್ಟಿ : ರಾಜ್ಯದಲ್ಲಿ ಸದ್ಯ ತಲೆದೋರಿರುವ ಸಿಎಂ ಹಾಗು ಡಿಸಿಎಂ ಆಯ್ಕೆಯ ಬಗ್ಗೆ ಅಬಕಾರಿ ಸಚಿವ ತಿಮ್ಮಾಪುರ ಪತ್ರಕರ್ತರೊಂದಿಗೆ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಹಾಗು ಉಪಮುಖ್ಯಮಂತ್ರಿಗಳ ಆಯ್ಕೆ ಕುರಿತಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇಲ್ಲಸಲ್ಲದ ಹೇಳಿಕೆಗಳಿಂದ ತಲೆಕಡೆಸಿಕೊಳ್ಳುವ ಅಗತ್ಯವಿಲ್ಲವೆಂದರು.

Advertisement

ಯಾರು ಏನೇ ಹೇಳಲಿ ಅದಕ್ಕೆಲ್ಲ ಉತ್ತರ ನೀಡುವುದು ಹೈಕಮಾಂಡ್‌ವೆಂದು ತಿಮ್ಮಾಪುರ ಸ್ಪಷ್ಟವಾಗಿ ನುಡಿದರು.

ರದ್ದುಗೊಳಿಸುತ್ತೇವೆ: ನಿಯಮಿತ ಸಮಯ ಮೀರಿ ಬಾಗಲಕೋಟೆ ಜಿಲ್ಲೆಯಾದ್ಯಂತ ಬಾರ್‌ಗಳನ್ನು ತೆರೆಯುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಂಥವರ ಬಗ್ಗೆ ಸೂಕ್ತ ದಾಖಲೆಗಳು ದೊರೆತಲ್ಲಿ ಯೋಗ್ಯ ಕ್ರಮ ಕೈಗೊಂಡು ಲೈಸೆನ್ಸ್ ರದ್ದು ಮಾಡುವ ಕಾರ್ಯ ಮಾಡಲಾಗುವುದೆಂದು ಸ್ಪಷ್ಟಪಡಿಸಿದರು.

ದ್ವೇಷ ರಾಜಕಾರಣ ನಾವೇಕೆ ಮಾಡೋಣ: ಬಿಜೆಪಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ವಿರುದ್ಧ ದ್ವೇಷ ರಾಜಕಾರಣ ಮಾಡುತ್ತಿದ್ದಾರೆಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ತನಿಖೆ ನಡೆಸುವುದು ಪೊಲೀಸರು, ಅದನ್ನು ವಿಸ್ತೃತ ವರದಿ ಮಾಡುವವರು ಮಾಧ್ಯಮ. ಇವೆಲ್ಲದರ ಸತ್ಯಾಸತ್ಯತೆಗಳ ಮಧ್ಯೆ ಕಾಂಗ್ರೆಸ್‌ನವರಾದ ನಾವೇಕೆ ದ್ವೇಷ ರಾಜಕಾರಣ ಮಾಡೋಣವೆಂದು ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next