Advertisement

Congress ಕುತಂತ್ರದಿಂದ ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಘೋಷಣೆ: ಈಶ್ವರಪ್ಪ

06:35 PM Feb 28, 2024 | Shreeram Nayak |

ಶಿವಮೊಗ್ಗ:ಕಾಂಗ್ರೆಸ್‌ ಕುತಂತ್ರದಿಂದ ವಿಧಾನಸೌಧದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಕೂಗಲಾಗಿದೆ. ಘೋಷಣೆ ಕೂಗಿದ ವ್ಯಕ್ತಿ ಹೇಗೆ ಒಳಗೆ ಹೋದ, ಅವನಿಗೆ ಪಾಸ್‌ ಕೊಟ್ಟಿದ್ದು ಯಾರು, ಕೂಗಿದವನನ್ನು ಬಂ ಧಿಸಲು ಏನು ತೊಂದರೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪ್ರಶ್ನಿಸಿದರು.

Advertisement

ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ್‌ ಪರ ಘೋಷಣೆ ಕೂಗಿದ್ದನ್ನು ಕಾಂಗ್ರೆಸ್‌ ನಾಯಕರು ಖಂಡಿಸದೆ ಇರುವುದು ದುರ್ದೈವ. ನಾಸಿರ್‌ ಹುಸೇನ್‌ ಜಿಂದಾಬಾದ್‌ ಎಂದು ಕೂಗಿದ್ದರು ಎಂದು ಹೇಳುತ್ತಿದ್ದಾರೆ.

ಸಿದ್ದರಾಮಯ್ಯ ಸಹ ಅದೇ ರೀತಿ ಟ್ವೀಟ್‌ ಮಾಡಿದ್ದಾರೆ. ಗೃಹಮಂತ್ರಿ ಪರಮೇಶ್ವರ್‌ ಈ ಬಗ್ಗೆ ಎಫ್‌ಎಸ್‌ಎಲ್‌ ರಿಪೋರ್ಟ್‌ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ. ಕಾಂಗ್ರೆಸ್ಸಿಗರ ಕುತಂತ್ರ ನಡೆಯುತ್ತಿದೆ. ಕೇಸ್‌ ಹಾಕುತ್ತೇವೆ, ಬಂಧಿಸಲ್ಲ ಎನ್ನುತ್ತಿದ್ದಾರೆ. ಇದು ದೇಶಭಕ್ತರು, ದೇಶದ್ರೋಹಿಗಳ ಮಧ್ಯೆ ನಡೆಯುತ್ತಿರುವ ಸಂಘರ್ಷ. ರಾಷ್ಟ್ರದ್ರೋಹಿ ಸಂಘಟನೆಗಳ ಜತೆ ಕೈಜೋಡಿಸಿದ ಎಲ್ಲರ ಮೇಲೆ ಕೇಂದ್ರ ಸರ್ಕಾರದ ಮೂಲಕ ಕ್ರಮ ಕೈಗೊಳ್ಳುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next