Advertisement

Mandya ಕಾಂಗ್ರೆಸ್‌ ಅಭ್ಯರ್ಥಿ ಅಂತಿಮ, ಘೋಷಣೆಯಷ್ಟೇ ಬಾಕಿ: ಚಲುವರಾಯ ಸ್ವಾಮಿ

01:04 AM Feb 23, 2024 | Team Udayavani |

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿದೆ. ಹೈಕಮಾಂಡ್‌ ಘೋಷಣೆಯಷ್ಟೇ ಬಾಕಿ ಉಳಿದಿದೆ ಎಂದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಯಾರನ್ನೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಸಂದರ್ಭ ಬಂದಾಗ ಜನರು ತೀರ್ಮಾನಿಸುತ್ತಾರೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಚ್ಚು ಸೀಟು ಗೆಲ್ಲಬೇಕು ಎಂದು ಹೇಳಿದರು.

ಸುಮಲತಾರಷ್ಟು ಬುದ್ಧಿವಂತನಲ್ಲ

ನಾನು ಸುಮಲತಾರಷ್ಟು ಬುದ್ಧಿ ವಂತನಲ್ಲ. ನಾನು ಜಿಲ್ಲೆಯ ಮಣ್ಣಿನ ಒಬ್ಬರನ್ನು ಅಭ್ಯರ್ಥಿ ಮಾಡುತ್ತೇವೆ ಎಂದಿದ್ದೆ. ಅವರು ಅದಕ್ಕೆ ಏನು ವಿವರಣೆ ಕೊಡುತ್ತಾರೋ ಕೊಡಲಿ. ಅವರು ಸಂಸದರು. ಅವರು ಲೋಕಸಭೆ ಚುನಾವಣೆಗೆ ಟಿಕೆಟ್‌ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಆದರೆ ಆಯ್ಕೆ ನಿರ್ಧಾರ ಜನರದ್ದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next