Advertisement

Sirsi ಜಾತ್ರೆಯಲ್ಲಿ ಸರ ಖರೀದಿಸಿದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌

06:43 PM Mar 26, 2024 | Team Udayavani |

ಶಿರಸಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಾ|ಅಂಜಲಿ ಹೇಮಂತ್‌ ನಿಂಬಾಳ್ಕರ್‌ ಮಂಗಳವಾರ ಶಿರಸಿ ಜಾತ್ರಾ ಪೇಟೆ ಸುತ್ತಾಡಿ ಗಮನ ಸೆಳೆದರು.

Advertisement

ಶಿರಸಿ ಮಾರಿಕಾಂಬಾ ದೇವಿ ಜಾತ್ರೆ ಹಿನ್ನೆಲೆಯಲ್ಲಿ ಜಾತ್ರಾ ಗದ್ದುಗೆಗೆ ಭೇಟಿ ನೀಡಿ ಮಾರಿಕಾಂಬೆಗೆ ಉಡಿ ಸೇವೆ ಸಲ್ಲಿಸಿದ ಅವರು, ಬಳಿಕ ಜಾತ್ರಾ ಪೇಟೆಯಲ್ಲೆಲ್ಲ ತಿರುಗಾಡಿದರು.

ಈ ವೇಳೆ ವ್ಯಾಪಾರಸ್ಥ ಮಹಿಳೆಯರೊಂದಿಗೆ ರುದ್ರಾಕ್ಷಿ ಮಾಲೆಗಳ ಕುರಿತು ಕುತೂಹಲದಿಂದ ಚರ್ಚಿಸಿದರು. ಪೇಟೆ ಸುತ್ತಾಡಿ ವಾಪಸ್‌ ತೆರಳುವ ವೇಳೆ ಫೋಟೋ ತೆಗೆಸಿಕೊಳ್ಳುವಂತೆ ವ್ಯಾಪಾರಸ್ಥ ಮಹಿಳೆಯೋರ್ವರ ಕರೆಗೆ ಓಗೊಟ್ಟು ಕಾರಿನಿಂದ ಇಳಿದು ಮತ್ತೆ ಬಂದು ಮಹಿಳೆಯರೊಂದಿಗೆ ಕುಶಲೋಪರಿ ವಿಚಾರಿಸಿ, ಅವರೊಂದಿಗೆ ಫೋಟೋ ತೆಗೆಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next