Advertisement

Lok Sabha Polls; ಸಂಘಟನೆಯ ಬಲವೇ ಕಾಂಗ್ರೆಸ್ ಬಲ: ಅಂಜಲಿ ನಿಂಬಾಳ್ಕರ್‌

05:30 PM Mar 25, 2024 | Team Udayavani |

ಶಿರಸಿ: ಸಂಘಟನೆಯ ಬಲವೇ ಕಾಂಗ್ರೆಸ್ ಬಲ ಎಂದು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ಹೇಳಿದರು.

Advertisement

ಅವರು‌ ನಗರದಲ್ಲಿ ಸೋಮವಾರ ಮಾತನಾಡಿ, ಸಂಸದ ಅನಂತಕುಮಾರ ಹೆಗಡೆ ಅವರು ಹಿಂದುತ್ವದ ಹೆಸರಿನಲ್ಲಿ ತಪ್ಪು ದಾರಿಗೆ ಎಳೆದರು. ನಾನು ಐದು ವರ್ಷ ಖಾನಾಪುರ ಶಾಸಕಿ ಆಗಿದ್ದಾಗಲೂ ಅವರನ್ನು ನೋಡಿಲ್ಲ. ಕ್ಷೇತ್ರದ ಜನರ ಆ ಕೋಪ ಮತಗಳಾಗಿ ಕಾಂಗ್ರೆಸ್ ಗೆ ಬರಲಿವೆ ಎಂದರು.

ನಾನು ಮೂಲತಃ ವೈದ್ಯೆ,ವಿಜ್ಞಾನ ದೃಷ್ಟಿಕೋನದಲ್ಲಿ ಅಧ್ಯಯನ ‌ಮಾಡುವೆ. ಕೈಗೆ ಐದೂ ಬೆರಳು ಹೇಗೆ‌‌ ಮಹತ್ವವೋ ಹಾಗೇ ಕ್ಷೇತ್ರದ ಎಲ್ಲರ ಮತಗಳೂ ನಿರ್ಣಾಯಕವೇ. ಒಂದು ಸಮುದ್ರ ಆಗಲು ಎಲ್ಲ ಹನಿಗಳೂ‌ ಮಹತ್ವವೇ ಆಗಿವೆ. ಪಕ್ಷ ಸಂಘಟನೆಯ ಬಲದಲ್ಲಿ ಗೆಲ್ಲಲಿದೆ ಎಂದರು.

ಉತ್ತರ ಕನ್ನಡ‌ ಲೋಕಸಭಾ ಕ್ಷೇತ್ರದಲ್ಲಿ ಎಂಟು‌ ಕ್ಷೇತ್ರದಲ್ಲಿ ಆರು ಬಿಜೆಪಿ ಬಲವಿದೆ. ಪಕ್ಷದ ಅಧ್ಯಕ್ಷರು, ಕಾರ್ಯಕರ್ತರು, ಪ್ರಮುಖರು, ಶಾಸಕರು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕ್ಷೇತ್ರಕ್ಕೆ ಹೈಟೆಕ್ ಆಸ್ಪತ್ರೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಅಭಿವೃದ್ದಿ‌ ಕನಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next