Advertisement

ಕಾಂಗ್ರೆಸ್‌, ಬಿಜೆಪಿ ಕೈ ಬಿಟ್ಟು ಜೆಡಿಎಸ್‌ ಬೆಂಬಲಿಸಿ

05:08 PM Apr 30, 2018 | |

ಸುರಪುರ: ಕ್ಷೇತ್ರದಲ್ಲಿ ಇದುವರೆಗೂ ಕಾಂಗ್ರೆಸ್‌ ಮತ್ತು ಬಿಜೆಪಿ ಎರಡು ಪಕ್ಷಗಳ ಆಡಳಿತ ನೋಡಿದ್ದೀರಿ. ಇವರ್ಯಾರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ ಎಂದು ಜೆಡಿಎಸ್‌ ಅಭ್ಯರ್ಥಿ ರಾಜಾ ಕೃಷ್ಣಪ್ಪ ನಾಯಕ ಮನವಿ ಮಾಡಿದರು.

Advertisement

ತಾಲೂಕಿನ ಮಂಜಲಾಪುರ ಗ್ರಾಮದಲ್ಲಿ ಭಾನುವಾರ ನಡೆದ ಪ್ರಚಾರ ಸಭೆಯಲ್ಲಿ ಮತಯಾಚನೆ ಮಾಡಿದ ಅವರು, ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತು ರಾಜುಗೌಡ ಪರಸ್ಪರ ಆರೋಪ ಮಾಡುತ್ತಾ ಕಾಲ ಕಳೆದು ಕ್ಷೇತ್ರದ ಅಭಿವೃದ್ಧಿ ಮರೆತ್ತಿದ್ದಾರೆ. ಆದ್ದರಿಂದ ನಾನು ಪ್ರಥಮ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದೇನೆ. ಅಭಿವೃದ್ಧಿಗಾಗಿ ನನ್ನನ್ನ ಬೆಂಬಲಿಸಿ ಗೆಲ್ಲಿಸಿ ತರಬೇಕು ಎಂದು ಕೋರಿದರು.

ಈ ಹಿಂದೆ 20 ತಿಂಗಳ ಅಧಿಕಾರ ನಡೆಸಿದ ಕುಮಾರಣ್ಣನವರು ಉತ್ತಮ ಆಡಳಿತ ನೀಡಿದ್ದಾರೆ. ಮತ್ತೆ ಜೆಡಿಎಸ್‌ ಆಡಳಿತಕ್ಕಾಗಿ ಜನತೆ ಎದುರು ನೋಡುತ್ತಿದೆ. ಕುಮಾರಣ್ಣನನ್ನು ಮತ್ತೂಮ್ಮೆ ಮುಖ್ಯಮಂತ್ರಿಯನ್ನಾಗಿ ಮಾಡಲು ಜನತೆ ಸಿದ್ಧರಾಗಿದ್ದಾರೆ. ತಾವು ಕೂಡ ಜೆಡಿಎಸ್‌ ಬೆಂಬಲಿಸಬೇಕು ಎಂದು ವಿನಂತಿಸಿದರು.

ಪಕ್ಷದ ತಾಲೂಕು ಅಧ್ಯಕ್ಷ ಮಲ್ಲಯ್ಯ ಕಮತಗಿ, ಮುಖಂಡರಾದ ಭೀಮನಗೌಡ ಪಾಟೀಲ ಕಚಕನೂರ, ರಾಜಾ ವಾಸುದೇವ ನಾಯಕ, ರಾಜಾ ಲಕ್ಷ್ಮೀ ನಾರಾಯಣ ನಾಯಕ, ರಾಜಾ ಎಸ್‌. ಗೋಪಾಲ ನಾಯಕ, ಚಿರಂಜೀವಿ ನಾಯಕ ಇತರರಿದ್ದರು. ಇದೇ ವೇಳೆ ಗ್ರಾಮದ ಕೆಲವರು ರಾಜಾ ಕೃಷ್ಣಪ್ಪ ನಾಯಕ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next