Advertisement

Congress ಬ್ಯಾಂಕ್‌ ಖಾತೆ ನಿಷ್ಕ್ರಿಯ: ತಡೆಗೆ ಐಟಿ ನ್ಯಾಯಮಂಡಳಿ ನಕಾರ

12:49 AM Mar 09, 2024 | Team Udayavani |

ಹೊಸದಿಲ್ಲಿ: ಆದಾಯ ತೆರಿಗೆ ಇಲಾಖೆ ವಿಧಿಸಿರುವ 210 ಕೋಟಿ ರೂ. ದಂಡ ಹಾಗೂ ಬ್ಯಾಂಕ್‌ ಖಾತೆ­ಗಳ ಮೇಲೆ ವಿಧಿಸಿರುವ ನಿರ್ಬಂಧ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಕಾಂಗ್ರೆಸ್‌ ಸಲ್ಲಿಸಿದ್ದ ಮನವಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ಶುಕ್ರವಾರ ತಿರಸ್ಕರಿಸಿದೆ.

Advertisement

ಕಾಂಗ್ರೆಸ್‌ ಪರವಾಗಿ ಹಾಜರಾಗಿದ್ದ ವಕೀಲ ವಿವೇಕ್‌ ತಂಖಾ, ಈ ಆದೇಶವನ್ನು ಕನಿಷ್ಠ 10 ದಿನ ಗಳವರೆಗಾದರೂ ತಡೆ ಹಿಡಿಯಬೇಕು. ಇದರಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪಕ್ಷಕ್ಕೆ ಅವ ಕಾಶ ದೊರೆಯುತ್ತದೆ ಎಂದು ವಾದಿಸಿದರು. ಆದರೆ ಈ ರೀತಿಯ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಮಂಡಳಿ ಐಟಿ ಇಲಾ ಖೆಯ ಆದೇಶಕ್ಕೆ ತಡೆ ನೀಡಲು ನಿರಾಕರಿಸಿತು.

ಏನಿದು ಪ್ರಕರಣ: ತೆರಿಗೆ ವಂಚನೆ ಮಾಡಲಾಗಿದೆ ಎಂಬ ಕಾರಣಕ್ಕೆ ಆದಾಯ ತೆರಿಗೆ ಇಲಾಖೆ ನಮ್ಮ ಬ್ಯಾಂಕ್‌ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಫೆ.16ರಂದು ಕಾಂಗ್ರೆಸ್‌ ಆರೋಪಿಸಿತ್ತು. ಆದರೆ ಈ ಬಗ್ಗೆ ಐಟಿ ಇಲಾಖೆ ಅಧಿಕೃತ ಆದೇಶ ಹೊರಡಿಸದಿದ್ದರೂ, ತೆರಿಗೆ ವಂಚನೆ ಮಾಡಿದರೆ ಬ್ಯಾಂಕ್‌ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸಹಜ ಪ್ರಕ್ರಿಯೆ ಎಂದು ಹೇಳಿತ್ತು. ಇದಾದ 2 ದಿನದ ಬಳಿಕ ತಮ್ಮ ಖಾತೆಯಿಂದ 65 ಕೋಟಿ ರೂ.ಗಳನ್ನು ಐಟಿ ಇಲಾಖೆ ವಿತ್‌ಡ್ರಾ ಮಾಡಿಕೊಂಡಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next