Advertisement

ಅಯೋಧ್ಯೆ ಕೇಸ್‌ :ಜಡ್ಜ್ ಗಳಿಗೆ ಕಾಂಗ್ರೆಸ್‌ ಬೆದರಿಕೆ ಹಾಕಿತ್ತು; ಮೋದಿ

04:28 PM Nov 25, 2018 | |

ಜೈಪುರ: ಅಯೋಧ್ಯೆಯಲ್ಲಿ  ರಾಮ ಮಂದಿರ ನಿರ್ಮಾಣಕ್ಕಾಗಿ ಹೋರಾಟ ತೀವ್ರ ಗೊಳ್ಳುತ್ತಿರುವ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಪಕ್ಷ ದ ವಿರುದ್ಧ  ಮಾಡಿರುವ ಗಂಭೀರ ಆರೋಪ ಹೊಸ ಚರ್ಚೆ ಹುಟ್ಟು ಹಾಕಿದೆ. 

Advertisement

ರಾಜಸ್ಥಾನದಲ್ಲಿ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದ ಪ್ರಧಾನಿ ಮೋದಿ ‘ಅಯೋಧ್ಯೆ ರಾಮಮಂದಿರ ಪ್ರಕರಣದ ವಿಚಾರಣೆಯನ್ನು 2019 ರ ಚುನಾವಣೆಯ ವರೆಗೆ ತಡ ಮಾಡುವಂತೆ ಕೇಳಿತ್ತು. ಇದಕ್ಕೆ ಒಪ್ಪದ ನ್ಯಾಯಮೂರ್ತಿಗಳಿಗೆ ದೋಷಾರೋಪಣೆ ಮಾಡುವುದಾಗಿ ಬೆದರಿಕೆ ಹಾಕಿ ಭಯದ ವಾತಾವರಣ ನಿರ್ಮಾಣ ಮಾಡಿತ್ತು’ ಎಂದು ಆರೋಪಿಸಿದ್ದಾರೆ.

ಅಯೋಧ್ಯೆಯಲ್ಲಿ ಭಾನುವಾರ ಶಿವಸೇನೆ ಮತ್ತು ವಿಎಚ್‌ಪಿ ಪ್ರತ್ಯೇಕವಾಗಿ ಬೃಹತ್‌ ಸಮಾವೇಶಗಳನ್ನು ಮಾಡಿ ರಾಮ ಮಂದಿರ ನಿರ್ಮಾಣಕ್ಕಾಗಿ ಒತ್ತಯಾ ಮಾಡಿರುವ ವೇಳೆಯಲ್ಲೇ ಪ್ರಧಾನಿ ಈ ಆರೋಪ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next