Advertisement

ಮೋದಿ ಸರಕಾರದಿಂದ ಐಟಿ, ಇಡಿ ದುರ್ಬಳಕೆ, ಮತದಾರಿಂದ ತಕ್ಕ ಉತ್ತರ : ಚಿದಂಬರಂ

12:53 PM Apr 18, 2019 | Team Udayavani |

ಹೊಸದಿಲ್ಲಿ : ವಿರೋಧ ಪಕ್ಷಗಳ ನಾಯಕರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಸರಕಾರ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯವನ್ನು ಛೂ ಬಿಟ್ಟಿದೆ; ಇದಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರು ಭಾರತೀಯ ಜನತಾ ಪಕ್ಷಕ್ಕೆ ತಕ್ಕುದಾದ ಉತ್ತರವನ್ನು ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಇಂದು ಬುಧವಾರ ಹೇಳಿದೆ.

Advertisement

ಡಿಎಂಕೆ ನಾಯಕಿ ಕನಿಮೋಳಿ ಅವರ ತೂತುಕುಡಿ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ಚುನಾವಣಾಧಿಕಾರಿಗಳ ಶೋಧ ತಂಡದೊಂದಿಗೆ ದಾಳಿ ಮಾಡಿದ ಒಂದು ದಿನದ ತರುವಾಯ ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಅವರು “ಸುದ್ದಿ ಏನೆಂದರೆ ಕನಿಮೋಳಿ ನಿವಾಸದಲ್ಲಿ ಅವರಿಗೆ ಏನೂ ಸಿಗಲಿಲ್ಲ ಎನ್ನುವುದೇ ಆಗಿದೆ’ ಎಂದು ಸರಣಿ ಟ್ವೀಟ್‌ ಮಾಡಿದರು.

ಆದಾಯ ತೆರಿಗೆ ಇಲಾಖೆ ತಮಿಳು ನಾಡಿನಲ್ಲಿ ಸ್ವೇಚ್ಚಾಚಾರದ ಮತ್ತು ಆಂಶಿಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಚಿದಂಬರಂ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next