Advertisement

Congress ಶಾಸಕರಿಗೆ ಈಗಲೂ 50 ಕೋ.ರೂ. ಆಫ‌ರ್‌: ಸಿಎಂ ಹೊಸ ಬಾಂಬ್‌

10:18 PM Mar 22, 2024 | Team Udayavani |

ಬೆಂಗಳೂರು: ಕಾಂಗ್ರೆಸ್‌ ಶಾಸಕರ ಖರೀದಿಗೆ ಈಗಲೂ ಬಿಜೆಪಿಯಿಂದ ಪ್ರಯತ್ನ ನಡೆದಿದ್ದು, ತಲಾ 50 ಕೋಟಿ ರೂ. ಆಫ‌ರ್‌ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಸಂಪೂರ್ಣ ಬಹುಮತ ಹೊಂದಿರುವ ಸರಕಾರ ಇದ್ದರೂ “ಆಪರೇಷನ್‌ ಕಮಲ’ಕ್ಕೆ ಪ್ರಯತ್ನ ನಡೆಯುತ್ತಲೇ ಇದೆ. ನಮ್ಮ ಶಾಸಕರಿಗೆ ರಾಜೀನಾಮೆ ನೀಡುವಂತೆ ಇವತ್ತಿಗೂ ಅವರು (ಬಿಜೆಪಿ) 50 ಕೋಟಿ ರೂ. ಆಫ‌ರ್‌ ಮಾಡುತ್ತಿದ್ದಾರೆ. ಜತೆಗೆ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ನಡೆಯುವ ಚುನಾವಣೆ ಖರ್ಚು ಕೂಡ ತಾವೇ ಭರಿಸುವುದಾಗಿಯೂ ಹೇಳುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.

ಈ ಹಿಂದೆ ಕೂಡ ಆಪರೇಷನ್‌ ಕಮಲದ ಮೂಲಕ ಶಾಸಕರನ್ನು ಖರೀದಿ ಮಾಡಿ ಸರಕಾರವನ್ನು ಬೀಳಿಸಿದ್ದರು. ಅವರು ಭ್ರಷ್ಟಾಚಾರದ ಪಿತಾಮಹ (ಬಿಜೆಪಿಗೆ). ಅದೇ ಹಣದಿಂದ ಈಗಲೂ ಖರೀದಿಗೆ ಯತ್ನ ಮುಂದುವರಿದಿದೆ ಎಂದು ದೂರಿದರು.

ಇ.ಡಿ., ಐಟಿ ಸೇರಿ ಸರಕಾರದ ಅಂಗಸಂಸ್ಥೆಗಳು ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ. ಬರೀ ಕಾಂಗ್ರೆಸ್‌ನಲ್ಲಿ ಮಾತ್ರ ಶ್ರೀಮಂತರಿದ್ದಾರೆಯೇ? ಬಿಜೆಪಿಯಲ್ಲಿ ಯಾರೂ ಇಲ್ಲವೇ? ಅಕ್ರಮ ಸಂಪಾದನೆ ಮಾಡಿದವರು ಕಮಲ ಪಾಳಯದಲ್ಲಿ ಯಾರೂ ಇಲ್ಲವೇ? ಕಾಂಗ್ರೆಸ್‌ನ ಖಾತೆಗಳಿಗೆ ನಿರ್ಬಂಧ ಹೇರಲಾಗಿದೆ. ಬಿಜೆಪಿ ಖಾತೆಗಳಿಗೆ ಯಾಕಿಲ್ಲ ಈ ನಿರ್ಬಂಧ ಎಂದು ತರಾಟೆಗೆ ತೆಗೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next