Advertisement

Politics: ರಾಜ್ಯ ಸರಕಾರದಲ್ಲಿ ಗೊಂದಲ,ಭಿನ್ನಾಭಿಪ್ರಾಯ: ಬಿ.ವೈ.ವಿಜಯೇಂದ್ರ

11:03 PM Oct 08, 2023 | Team Udayavani |

ಶಿವಮೊಗ್ಗ: ಸಿಎಂ-ಸಚಿವರು, ಸಿಎಂ-ಡಿಸಿಎಂ ನಡುವೆ ಹಲವು ವಿಷಯಕ್ಕೆ ಸಂಬಂಧಿಸಿ ಗೊಂದಲ ಇದೆ. ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಗೊಂದಲಗಳು ಮುಂದುವರಿದಿದ್ದು, ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸ ಕ ಬಿ.ವೈ.ವಿಜಯೇಂದ್ರ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ವಿಳಂಬ ಮಾಡಿ ಸರಕಾರ ಬರಗಾಲ ಘೋಷಿಸಿದೆ. ಈಗ ಕೇಂದ್ರದಿಂದ ತಂಡ ಬಂದಿದೆ. ಇದರ ನಡುವೆ ಸರಕಾರ ಹೊಸದಾಗಿ ಮದ್ಯದಂಗಡಿಗಳಿಗೆ ಲೈಸೆನ್ಸ್‌ ನೀಡಲು ಉತ್ಸುಕವಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಸಿಎಂ, ಡಿಸಿಎಂ ದ್ವಂದ್ವ ನಿಲುವು ಹೊಂದಿದ್ದಾರೆ. ಇದೆಲ್ಲವೂ
ಬಡವರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲದುದನ್ನು ತೋರಿಸುತ್ತಿದೆ ಎಂದರು.

ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಮನೂರು ರಾಜಕಾರಣಿಯಾಗಿ ಈ ಮಾತನ್ನು ಹೇಳಿಲ್ಲ. ಸಮಾಜದ ಮುಖಂಡರಾಗಿ, ವೀರ ಶೈ ವ-ಲಿಂಗಾ ಯತ ಸಂಘ ಟ ನೆಯ ಅಧ್ಯಕ್ಷರಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದ ಪರಿಸ್ಥಿತಿಯನ್ನೇ ನೋಡಿ ಹೇಳಿರುವ ಅವರ ಮಾತನ್ನು ಆಡಳಿತ ನಡೆಸುವವರು ಉದಾರ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next