Advertisement

Valmiki Scam; ನಿಗಮ ಹಗರಣ ವಿರುದ್ಧ ಬಳ್ಳಾರಿಯಲ್ಲಿ ಸಮಾವೇಶ: ಸುನೀಲ್‌ ಕುಮಾರ್‌

09:33 PM Aug 04, 2024 | Team Udayavani |

ಬೆಂಗಳೂರು: ವಾಲ್ಮೀಕಿ ಹಗರಣವನ್ನು ಖಂಡಿಸಿ ಬಳ್ಳಾರಿಯಲ್ಲಿ ಸಮಾವೇಶ ನಡೆಸಲು ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಹೇಳಿದರು.

Advertisement

ಮೈಸೂರು ಚಲೋ ಪಾದಯಾತ್ರೆಯ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಆ.10ರ ಒಳಗೆ ರಾಜೀನಾಮೆ ನೀಡಬೇಕು.

ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಲಾಗುವುದು. ರಾಜ್ಯದ ಇತಿಹಾಸದಲ್ಲೇ ಇಂತಹ ಹಗರಣಗಳು ನಡೆದ ಉದಾಹರಣೆಯೇ ಇಲ್ಲ. ವಾಲ್ಮೀಕಿ ಹಗರಣದಲ್ಲಿ ವರಿಶಿಷ್ಟ ಪಂಗಡದ ಅಭಿವೃದ್ಧಿಯ ಹಣವನ್ನು ಪೂರಾ ತಿಂದು ಹಾಕಿದ್ದಾರೆ. ಮುಖ್ಯಮಂತ್ರಿಯೇ ಹಗರಣದ ರೂವಾರಿಯಾಗಿರುವುದರಿಂದ ಸದನದ ಒಳಗೆ ಉತ್ತರ ಕೊಡದೇ ಪಲಾಯನ ಮಾಡಿದರು ಎಂದು ಟೀಕಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next