Advertisement

ಭೂ ಪರಭಾರೆ ಕುರಿತು ಸಮಗ್ರ ತನಿಖೆ ನಡೆಸಿ

08:40 AM Jun 23, 2019 | Team Udayavani |

ಹುಬ್ಬಳ್ಳಿ: ಜಿಂದಾಲ್‌ ಕಂಪನಿಗೆ 3,666 ಎಕರೆ ಭೂಮಿ ಪರಭಾರೆ ಮಾಡದಂತೆ ಎದ್ದಿರುವ ಆಕ್ಷೇಪ ಕುರಿತು ಗಂಭೀರ ಅಧ್ಯಯನವಾಗಬೇಕು. ಜಿಂದಾಲ್‌ಗೆ ಈ ಹಿಂದೆ ನೀಡಿದ ಭೂಮಿಯ ಸಂಪೂರ್ಣ ಲೆಕ್ಕ ತಪಾಸಣೆ ಆಗಬೇಕು ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ ಆಗ್ರಹಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣದ ತನಿಖೆಗೆ ರಾಜ್ಯ ಸರಕಾರ ಸಂಪುಟ ಉಪ ಸಮಿತಿ ರಚಿಸಿರುವುದು ಸಕಾರಾತ್ಮಕ ಬೆಳವಣಿಗೆ. ಈ ಸಮಿತಿ ತಕ್ಷಣ ಕಾರ್ಯ ಪ್ರವೃತ್ತವಾಗಬೇಕು. ಹಿಂದಿನ ಸರಕಾರದಲ್ಲಿ ಸಂಪುಟ ಉಪ ಸಮಿತಿ ವರದಿ ನೀಡಿತ್ತು. ಕಾನೂನು ಇಲಾಖೆಯ ತಜ್ಞರು ಭೂಮಿ ಪರಭಾರೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಆದ್ದರಿಂದ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹ, ಸಾಧಕ-ಬಾಧಕಗಳ ಸಮಗ್ರ ತನಿಖೆಯಾಗಬೇಕು. ಉಪ ಸಮಿತಿಯ ಶಿಫಾರಸ್ಸಿನ ನಂತರ ಸರಕಾರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು. ಉಪ ಸಮಿತಿ ಕಾಟಾಚಾರದ ವರದಿ ಕೊಡಲ್ಲ. ಸಮರ್ಪಕ ನಿರ್ಣಯ ಕೈಗೊಳ್ಳಲು ಇದು ಅಸ್ತ್ರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next