Advertisement

ಹಾಲು ಆಮದು ಒಪ್ಪಂದಕ್ಕೆ ಖಂಡನೆ

04:19 PM Oct 25, 2019 | Team Udayavani |

ಮಾಗಡಿ: ವಿದೇಶದಿಂದ ಹಾಲು ಆಮದು ಒಪ್ಪಂದ ನೀತಿ ಖಂಡಿಸಿ ತಾಲೂಕು ರೈತ ಸಂಘದ ವತಿಯಿಂದ ಗುರುವಾರ ರಾಮನಗರ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್‌ ಪ್ರತಿಭಟನೆ ತಾಲೂಕಿ ನಿಂದ ನೂರಾರು ರೈತರು ವಾಹನದಲ್ಲಿ ತೆರಳಲು ಸಂಘದ ಅಧ್ಯಕ್ಷ ಹೊಸಪಾಳ್ಯದ ಲೋಕೇಶ್‌ ಚಾಲನೆ ನೀಡಿದರು.

Advertisement

ಪಟ್ಟಣದಲ್ಲಿ ಕಲ್ಯಾಗೇಟ್‌ ವೃತ್ತದ ಗಣಪತಿಗೆ ಪೂಜೆ ಸಲ್ಲಿಸಿ, ರಾಮನಗರದಲ್ಲಿ ನಡೆಯಲಿರುವ ಪ್ರತಿಭಟನೆಗೆ ತೆರಳಲು ವಾಹನಗಳಿಗೆ ಚಾಲನೆ ನೀಡಿದ ಅವರು ಮಾತನಾಡಿ, ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಮುಕ್ತ ವ್ಯಾಪಾರ ಒಪ್ಪಂದದ ವಿರುದ್ಧ ಪ್ರತಿಭಟನೆ ನಡೆಸಲು ರೈತ ಸಂಘಟನೆ ಜೊತೆಗೆ ವಿವಿಧ ಸಂಘ- ಸಂಸ್ಥೆಗಳು, ಜನಪರ ಹೋರಾಟಗಾರರು ಸಂಪೂರ್ಣ ಸಹಕಾರ ನೀಡಿ ಬೆಂಬಲ ವ್ಯಕ್ತಪಡಿಸಿವೆ ಎಂದು ಹೇಳಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಧುಗೌಡ, ಟೌನ್‌ ಅಧ್ಯಕ್ಷ ರಂಗಸ್ವಾಮಯ್ಯ, ಮಂಜುನಾಥ್‌, ಜಯಣ್ಣ, ಹನುಮಂತರಾಜು, ದೊಡ್ಡರಂಗಯ್ಯ, ಉಮೇಶ್‌, ಗಿರಿಧರ್‌, ರಂಗಪ್ಪ, ವೆಂಕಟೇಶ್‌, ನಟರಾಜ್‌,ರಾಜಣ್ಣ, ಗಿರೀಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next