Advertisement

ಎಂಇಎಸ್‌ ಪುಂಡಾಟಿಕೆಗೆ ಖಂಡನೆ

11:01 AM Dec 18, 2021 | Team Udayavani |

ಕಾಳಗಿ: ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಎಂಇಎಸ್‌, ಶಿವಸೇನೆಯವರು ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿದ ಘಟನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಕರವೇ ತಾಲೂಕಾಧ್ಯಕ್ಷ ಜಾವೀದಮಿಯ್ಯ ಅಫಖಾನ್‌ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಘೋಷಣೆ ಕೂಗುವುದರ ಮೂಲಕ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಬೆಳಗಾವಿ ಜಿಲ್ಲೆಯಲ್ಲಿನ ಎಂಇಎಸ್‌, ಶಿವಸೇನಾ ಸಂಘಟನೆಗಳನ್ನು ಸಂಪೂರ್ಣ ನಿಷೇಸಬೇಕು. ಕರ್ನಾಟಕದ ಯಾವುದೇ ಭಾಗದಲ್ಲಿಯೂ ಎಂಇಎಸ್‌ ಹಾಗೂ ಶಿವಸೇನಾ ಸಂಘಟನೆ ಧ್ವಜ ಹಾರದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ನಾಗನಾಥ ತರಗೆ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಕರವೇ ತಾಲೂಕಾಧ್ಯಕ್ಷ ಜಾವೀದಮಿಯ್ಯ ಅಫಖಾನ್‌, ಬಾಬು ನಾಟಿಕಾರ, ಶಿವಾನಂದ ಕದಂ, ಕಾಳು ಬೆಳಗುಂಪಿ, ಸಾಬಣ್ಣ ಚಿಮ್ಮನಚೊಡ, ಲಿಂಗನಬಸವ ಸೇಡಂ, ಮಲ್ಲಿಕಾರ್ಜುನ ಮಂಗಲಗಿ, ಮಂಜುನಾಥ ಹೆಬ್ಟಾಳ, ಸಂಜುಕುಮಾರ ಮೊಘ, ಮೀರಸಾಬ ಮಡಕಿ, ಗುಂಡೆರಾಯ ಸಾತಖೇಡ್‌, ಮರಮೇಶ್ವರ ನಾಟೀಕರ್‌, ಅಜೀಜ ಬಳಗಾರ, ಕಾಶಿನಾಥ ತೆಲಗ್ಪಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next