Advertisement

ಉಳ್ಳಾಲ: ಒಂಬತ್ತುಕೆರೆ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಶಾಸಕರಿಂದ ಗುದ್ದಲಿ ಪೂಜೆ 

11:11 PM Feb 28, 2021 | Team Udayavani |

ಉಳ್ಳಾಲ: ಒಂಬತ್ತು ಕೆರೆಯ ಈ ರಸ್ತೆ ಅಭಿವೃದ್ಧಿಗೆ ಕಳೆದ ಹಲವು ವರ್ಷಗಳಿಂದ ಸ್ಥಳೀಯರ ಬೇಡಿಕೆಯಿಟ್ಟಿದ್ದು, ವೈಜ್ಞಾನಿಕವಾಗಿ ಈ ರಸ್ತೆಗೆ ಕಾಂಕ್ರೀಟ್‌ ಕಾಮಗಾರಿ ಅನಿವಾರ್ಯವಾಗಿದ್ದು, ಹಾಗಾಗಿ ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಕಾಮಗಾರಿ ನಡೆಸಲಾಗುವುದು ಎಂದು ಶಾಸಕ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

Advertisement

ಉಳ್ಳಾಲ ನಗರಸಭೆ ವ್ಯಾಪ್ತಿಯ ಒಂಬತ್ತುಕೆರೆ ಮೆರಿಡಿಯನ್‌ ಕಾಲೇಜಿನ 2ನೇ ಅಡ್ಡ ರಸ್ತೆ ಕಾಂಕ್ರೀಟ್‌ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಉಳ್ಳಾಲದಲ್ಲಿ ಒಂಬತ್ತುಕೆರೆಯ ಮತ್ತು ಕಲ್ಲಾಪು ಗಂಡಿ ರಸ್ತೆ ಮಳೆಗಾಲದಲ್ಲಿ ಸಂಚಾರ ದುಸ್ತರವಾಗಿದ್ದು, ಇದರಿಂದ ಡಾಮರು ಕಾಮಗಾರಿಯಿಂದ ರಸ್ತೆ ಬೇಗ ಗುಣಮಟ್ಟ ಕಳೆದುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಕಾಂಕ್ರೀಟ್‌ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಉಳ್ಳಾಲ ನಗರಸಭೆ ಉಪಾಧ್ಯಕ್ಷ ಅಯೂಬ್‌ ಮಂಚಿಲ, ಸ್ಥಳೀಯ ಕೌನ್ಸಿಲರ್‌ ಸಪ್ನಾ ಹರೀಶ್‌, ಕೌನ್ಸಿಲರ್‌ಗಳಾದ ಬಾಝಿಲ್‌ ಡಿ’ಸೋಜಾ, ಇಬ್ರಾಹಿಂ ಅಶ್ರಫ್‌, ಶಶಿಕಲಾ, ಅಬ್ದುಲ್‌ ಅಝೀಜ್‌ ಕೋಡಿ, ಸ್ಥಳಿಯರಾದ ಮಾರಪ್ಪ, ವಸಂತಿ, ಅನೀಸ್‌, ಝಿಯಾದ್‌, ನಝೀರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next