Advertisement

ಮಣಿಪಾಲ : ಕಾಂಕ್ರೀಟ್‌ ಸ್ಲ್ಯಾಬ್ ಎದ್ದು ಹೋಗಿ ವರ್ಷ 2 ಕಳೆದರೂ ಸ್ಪಂದನೆಯಿಲ್ಲ

11:38 AM Feb 12, 2022 | Team Udayavani |

ಉಡುಪಿ : ಮಣಿಪಾಲದ ಸಿಂಡಿಕೇಟ್‌ ಸರ್ಕಲ್‌ನಿಂದ ಟೈಗರ್‌ ಸರ್ಕಲ್‌ನತ್ತ ತೆರಳುವ ಪಾದಚಾರಿಗಳಿಗೆ ಡ್ರೈನೇಜ್‌ನ ಕಾಂಕ್ರೀಟ್‌ ಸ್ಲ್ಯಾಬ್ ಸಂಪೂರ್ಣ ಎದ್ದುಹೋದ ಕಾರಣ ಪಾದಚಾರಿಗಳು ಚರಂಡಿಯೊಳಗೆ ಬೀಳುವ ಸನ್ನಿವೇಶ ಎದುರಾಗಿದೆ.

Advertisement

ಇದೇ ಭಾಗದಲ್ಲಿ ನೆಹರೂ ಸ್ಮಾರಕ ಗ್ರಂಥಾಲಯವಿದ್ದು, ಹಲವು ಮಂದಿ ವಿದ್ಯಾರ್ಥಿಗಳು ಈ ಭಾಗದಲ್ಲಿ ತೆರಳು ತ್ತಾರೆ. ಕಳೆದ ಎರಡು ವರ್ಷಕ್ಕೂ ಅಧಿಕ ಸಮಯದಿಂದ ಗುಂಡಿ ತೆರೆದಿದೆ.
ತೆರೆದಿರುವ ಸ್ಲಾéಬ್‌ನ ಅಡಿಭಾಗದಲ್ಲಿ ಮದ್ಯದ ಬಾಟಲಿಗಳ ರಾಶಿ ಕಂಡು ಬರುತ್ತಿದೆ. ಗ್ರಂಥಾಲಯಕ್ಕೆ ಈ ಭಾಗದ ಸಹಿತ ವಿದೇಶಿ ವಿದ್ಯಾರ್ಥಿನಿಯರು ಆಗಮಿಸುತ್ತಿದ್ದು, ನಗರದ ಶೈಕ್ಷಣಿಕ ನಗರಿಯಲ್ಲಿ ಒಂದು ವರ್ಷದಿಂದ ತೆರೆದಿರುವ ಸ್ಲ್ಯಾಬ್ ಇನ್ನೂ ಮುಕ್ತಿ ನೀಡದಿರುವುದು ವಿಪರ್ಯಾಸವಾಗಿದೆ.

ಬೆಳಗ್ಗೆ, ಸಂಜೆ ಹಾಗೂ ರಾತ್ರಿ ವೇಳೆ ಹಲವರು ಈ ಭಾಗದಲ್ಲಿ ತೆರಳುತ್ತಾರೆ. ಕೆಲವೊಂದು ಕಾಂಕ್ರೀಟ್‌ ಸ್ಲ್ಯಾಬ್ ಎದ್ದು ಹೋಗಿರುವ ಕಾರಣ ಎಡವಿಬೀಳುವ ಘಟನೆ ನಡೆಯುತ್ತಿವೆ. ಬೀದಿ ದೀಪವಿದ್ದರೂ ರಾತ್ರಿವೇಳೆ ಅರಿವಿಗೆ ಬಾರದೆ ಹಲವರು ಹೊಂಡಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಅಲ್ಲದೆ ಗ್ರಂಥಾಲಯ, ಶೈಕ್ಷಣಿಕ ಸಂಸ್ಥೆಗಳಿರುವ ಮಣಿಪಾಲಕ್ಕೆ ಇದು ಶೋಭೆಯಲ್ಲ ಎನ್ನುತ್ತಾರೆ ಕೆಎಂಸಿ ನೌಕರ ಹಾಗೂ ಈ ಭಾಗದಲ್ಲಿ ದಿನನಿತ್ಯ ಗ್ರಂಥಾಲಯಕ್ಕೆ ಸಂಚರಿಸುವ ಶಿವಕುಮಾರ್‌ ಶೆಟ್ಟಿಗಾರ್‌ ಅವರು.

ಇದನ್ನೂ ಓದಿ : ಬೆಂಗಳೂರಿಗೆ ಕಾಲಿಟ್ಟ ಹಿಜಾಬ್ ವಿವಾದ : ಪ್ರೌಢಶಾಲೆಯಲ್ಲಿ ಬಿಗುವಿನ ವಾತಾವರಣ

Advertisement

Udayavani is now on Telegram. Click here to join our channel and stay updated with the latest news.

Next