Advertisement

ಗ್ರಾಪಂ ಅಧ್ಯಕ್ಷೆ, ಪಿಡಿಒ ಕಿರಿಕಿರಿಗೆ ಕಂಪ್ಯೂಟರ್‌ ಆಪರೇಟರ್‌ ಆತ್ಮಹತ್ಯೆ

10:13 AM Jan 27, 2020 | sudhir |

ಹನಮಸಾಗರ: ಅಂಟರಠಾಣಾ ಗ್ರಾ.ಪಂ. ಪಿಡಿಒ ಮತ್ತು ಅಧ್ಯಕ್ಷೆಯ ಕಿರುಕುಳಕ್ಕೆ ಬೇಸತ್ತು ವಿಷ ಸೇವಿಸಿದ್ದ ಕಂಪ್ಯೂಟರ್‌ ಆಪರೇಟರ್‌ ರಾಜಶೇಖರ ಸಂಗಪ್ಪ ತಮ್ಮಣ್ಣವರ(30) ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದಾರೆ.

Advertisement

ಯರಿಗೋನಾಳ ಗ್ರಾಮದ ರಾಜಶೇಖರ ಸಂಗಪ್ಪ ತಮ್ಮಣ್ಣವರ ಅಂಟರಠಾಣಾ ಗ್ರಾ.ಪಂ.ನಲ್ಲಿ ಮೂರು ವರ್ಷಗಳಿಂದ ಕಂಪ್ಯೂಟರ್‌ ಆಪರೇಟರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ 6 ತಿಂಗಳುಗಳಿಂದ ಪಿಡಿಒ ಅಮೀನಸಾಬ್‌ ಗಡಾದ, ಗ್ರಾ.ಪಂ. ಅಧ್ಯಕ್ಷೆ ಮಾದೇವಿ ಪಾಟೀಲ ಮತ್ತು ಅಧ್ಯಕ್ಷೆಯ ಮೈದುನ ಹನುಮಂತ ಗೌಡ ಪಾಟೀಲ್‌ ಕಿರುಕುಳ ನೀಡುತ್ತಿದ್ದರು. ಈ ಕುರಿತು ಮೃತ ರಾಜಶೇಖರ ತನ್ನ ಪತ್ನಿ ಬಳಿ ಹೇಳಿಕೊಂಡಿದ್ದರು. 4 ದಿನಗಳ ಹಿಂದೆ ವಿಷ ಸೇವಿಸಿದ್ದ ಅವರಿಗೆ ಕುಷ್ಟಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಕಾರಿಯಾಗದೇ ರವಿವಾರ ಮೃತಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next