Advertisement

ನವಲಗುಂದ ಸಂಪೂರ್ಣ ಬಂದ್‌; ತುರ್ತು ಸೇವೆ ಚಾಲ್ತಿ

05:12 PM Apr 25, 2021 | Team Udayavani |

ನವಲಗುಂದ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವೀಕೆಂಡ್‌ ಕರ್ಫ್ಯೂಘೋಷಣೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ.ಎಲ್ಲಾ ವ್ಯಾಪಾರಸ್ಥರು ವ್ಯಾಪಾರ ಬಂದ್‌ ಮಾಡಿ ಸಂಪೂರ್ಣಬೆಂಬಲ ಸೂಚಿಸಿದರು. ಬೆಳಗ್ಗೆ 10 ಗಂಟೆಯವರೆಗೆ ಕಿರಾಣಿ,ಇತರೆ ಸಾಮಗ್ರಿಗಳ ಖರೀದಿಗಾಗಿ ಸಡಿಲಿಕೆ ಇತ್ತು.

Advertisement

ಹೀಗಾಗಿಸಾರ್ವಜನಿಕರ ಓಡಾಟವೂ ಸ್ವಲ್ಪ ಹೆಚ್ಚಿತ್ತು. ನಂತರ ಪಟ್ಟಣದಎಲ್ಲಾ ಕಿರಾಣಿ, ತರಕಾರಿ ಇತರೆ ಅಂಗಡಿ-ಮುಂಗಟ್ಟುಗಳನ್ನುಸ್ವಯಂ ಬಂದ್‌ ಮಾಡುವುದರ ಮೂಲಕ ಸೆಮಿ ಲಾಕ್‌ಡೌನ್‌ಗೆ ಸಹಮತ ವ್ಯಕ್ತಪಡಿಸಿದರು. ತುರ್ತು ಸೇವೆಗಳಾದಮೆಡಿಕಲ್‌ ಸ್ಟೋರ್‌, ಆಸ್ಪತ್ರೆಗಳು ಸೇವೆಯಲ್ಲಿ ತೊಡಗಿದ್ದವು.

ಜನನಿಬಿಡ ಪ್ರದೇಶ ಗಾಂಧಿ ಮಾರುಕಟ್ಟೆ, ತರಕಾರಿ ಮಾರುಕಟ್ಟೆಸ್ತಬ್ಧವಾಗಿತ್ತು. ಬಸ್‌ ನಿಲ್ದಾಣದಲ್ಲಿ ದೂರದ ಊರಿನಕೆಲವೊಂದು ಬಸ್‌ಗಳನ್ನು ಹೊರತುಪಡಿಸಿ ಗ್ರಾಮೀಣಪ್ರದೇಶದ ಬಸ್‌ಗಳು ಸಂಚಾರ ಬಂದ್‌ಗೊಳಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next