Advertisement

ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರ

11:44 AM Jan 21, 2020 | Suhan S |

ದಾವಣಗೆರೆ: ಬೆಂಗಳೂರಿನ ಸ್ಪರ್ಧಾ ವಿಜೇತ ಐಎಎಸ್‌, ಕೆಎಎಸ್‌, ಕೆರಿಯರ್‌ ಅಕಾಡೆಮಿ ನಿರ್ದೇಶಕ ಡಾ| ಕೆ.ಎಂ. ಸುರೇಶ್‌ ಅವರಿಂದ ದಾವಣಗೆರೆ ಹಾಗೂ ಸುತ್ತಲಿನ ಜಿಲ್ಲೆಗಳ ಸ್ಪರ್ಧಾರ್ಥಿಗಳಿಗೆ ಕೆಎಎಸ್‌, ಪಿಎಸ್‌ಐ.ಶಿಕ್ಷಕರ ನೇಮಕಾತಿ, ಪಿಡಿಓ, ಎಫ್‌ಡಿಎ, ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗುವಂತೆ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಉಚಿತ ತರಬೇತಿ ಕಾರ್ಯಾಗಾರ ನಡೆಯಿತು.

Advertisement

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯ, ಸಾಮಾನ್ಯ ಅಧ್ಯಯನ, ಪರಿಸರ, ವಿಜ್ಞಾನ, ಸಾಮಾನ್ಯ ವಿಜ್ಞಾನ, ಮನೋಸಾಮರ್ಥ್ಯ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. 1,500 ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ದಾವಣಗೆರೆಯ ಉಪನ್ಯಾಸಕರಾದ ಮರಿಗೌಡ್ರು, ರಾಮಚಂದ್ರರಾವ್‌, ಪ್ರಭುದೇವ್‌, ವೆಂಕಟೇಶ್‌ಬಾಬು, ಜಗದೀಶ್‌ ಬಳೆಗಾರ ಅವರನ್ನು ಸನ್ಮಾನಿಸಲಾಯಿತು

Advertisement

Udayavani is now on Telegram. Click here to join our channel and stay updated with the latest news.

Next