Advertisement

ಸಚಿವ ಸ್ಥಾನಕ್ಕೆ ಪೈಪೋಟಿ ಒಳ್ಳೆಯದಲ್ಲ

11:11 PM Aug 24, 2019 | Lakshmi GovindaRaj |

ಬೆಳಗಾವಿ: ಸಚಿವ ಸ್ಥಾನಕ್ಕಾಗಿ ಶಾಸಕರ ಕಿತ್ತಾಟ ಸರಕಾರ ಹಾಗೂ ಜನರ ಮೇಲೆ ಬಹಳ ಪರಿಣಾಮ ಬೀರುತ್ತದೆ ಎಂದು ಕಾಂಗ್ರೆಸ್‌ನ ಹಿರಿಯ ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಶನಿವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈ ರೀತಿ ಶಾಸಕರ ಕಿತ್ತಾಟದಿಂದ ಒಳ್ಳೆಯ ಆಡಳಿತ ಕೊಡಲಾಗದು. ಸಚಿವ ಸ್ಥಾನಕ್ಕೆ ಹೆಚ್ಚಿನ ಪೈಪೋಟಿ ಕೂಡ ಒಳ್ಳೆಯದಲ್ಲ ಎಂದರು.

Advertisement

“ನಾನು ಹಾಗೂ ಉಮೇಶ ಕತ್ತಿ ಮೊದಲಿಂದಲೂ ಕೂಡಿಯೇ ಓಡಾಡುತ್ತೇವೆ. ಅವರ ಪಕ್ಷ ಅವರಿಗೆ, ನಮ್ಮ ಪಕ್ಷ ನಮಗೆ. ಪಕ್ಷದ ವಿಷಯ ಬಂದಾಗ ಬೇರೆ, ಬೇರೆಯಾಗಿ ಕೆಲಸ ಮಾಡುತ್ತೇವೆ’ ಎಂದು ಹೇಳಿದರು. ಬಾಲಚಂದ್ರ ಅವರಿಗೆ ಸಚಿವ ಸ್ಥಾನ ಸಿಗದೆ ಇರುವುದಕ್ಕೆ ರಮೇಶ ಜಾರಕಿಹೊಳಿ ಕಾರಣ ಎಂಬ ವಿಷಯಕ್ಕೆ ಪ್ರತಿಕ್ರಿಯೆ ನೀಡಿದ ಸತೀಶ, “ಇದರ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಅದು ಅವರ ಆಂತರಿಕ ವಿಚಾರ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next