Advertisement

ಮಹಾರಾಷ್ಟ್ರ: ರೈತರಿಗೆ ಸಮುದಾಯ ಬಾನುಲಿ ಸಹಾಯ

09:40 AM Nov 13, 2019 | Hari Prasad |

ಮುಂಬಯಿ: ಮಹಾರಾಷ್ಟ್ರದ ರಾಜ್ಯ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ ರೈತರಿಗೆ ಸಮುದಾಯ ರೇಡಿಯೋ ಚಾನೆಲ್‌ ಅನ್ನು ಪ್ರಾರಂಭಿಸುವ ಪ್ರಸ್ತಾವನೆ ಹೊಂದಿದೆ. ಈ ಮೂಲಕ ಹವಾಮಾನ ಬದಲಾವಣೆ ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿಯಂತೆ ಇದು ಕೆಲಸಮಾಡಲಿದೆ.

Advertisement

ರೇಡಿಯೋ ಚಾನೆಲ್‌ನಲ್ಲಿ ತಜ್ಞರಿಂದ ರೈತರ ಸಮಸ್ಯೆಗಳನ್ನು ಬಗೆಹರಿಸಿ ಅವರ ಹಿತ ಕಪಾಡುವ ಪ್ರಸ್ತಾವನೆ ಹೊಂದಿದೆ. ಹವಾಮಾನ ಬದಲಾವಣೆಯು ಕೃಷಿಗೆ ದೊಡ್ಡ ಸಮಸ್ಯೆಯಾಗಿದೆ. ಮಹಾರಾಷ್ಟ್ರ ಸೇರಿದಂತೆ ದೇಶ ಇತರ ರಾಜ್ಯಗಳಲ್ಲಿ ಸರಿಯಾದ ಹವಾಮಾನ ಮಾಹಿತಿ ಇಲ್ಲದೇ ರೈತರು ತೊಂದರೆ ಅನುಭವಿಸುತ್ತಿದ್ದ ಇದಕ್ಕೆ ಶಾಶ್ವತ ಮುಕ್ತಿ ನೀಡಲು ಇಲಾಖೆ ಕರ್ತವ್ಯ ನಿರ್ವಹಿಸಲಿದೆ.

ಸಮುದಾಯ ಬಾನುಲಿ ಆರಂಭಿಸಲು ಅದಕ್ಕೆ ಸಂಬಂಧಿಸಿದ ಅಗತ್ಯ ಅನುಮತಿಗಳನ್ನು ಪಡೆದುಕೊಳ್ಳಲಾಗಿದೆ ಎಂದು ರಾಜ್ಯ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ ಅಧ್ಯಕ್ಷ ಪಾಷಾ ಪಟೇಲ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next