Advertisement

ಹಿಂದೂ ಜನಜಾಗೃತಿ ಸಮಿತಿಯಿಂದ ಸರಕಾರಕ್ಕೆ  ಮನವಿ

11:16 AM Mar 28, 2017 | Team Udayavani |

ನಗರ: ರಾಷ್ಟ್ರ -ಧರ್ಮ -ಸಮಾಜ ವಿರೋಧಿ ಕೃತ್ಯಗಳನ್ನು ಖಂಡಿಸುವ ರಾಷ್ಟ್ರೀಯ ಹಿಂದೂ ಆಂದೋಲನದ ಅಂಗವಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ತಹಶೀಲ್ದಾರರ ಮೂಲಕ ಸರಕಾರಕ್ಕೆ ಸೋಮವಾರ ಮನವಿ ಸಲ್ಲಿಸಲಾಯಿತು.

Advertisement

ಬೆಂಗಳೂರಿನ ಹಾರೋಹಳ್ಳಿಯಲ್ಲಿ ಕಸಾಯಿ ಖಾನೆಯನ್ನು ಕೂಡಲೇ ಸ್ಥಗಿತಗೊಳಿಸಿ ಗೋವುಗಳ ಕಳ್ಳಸಾಗಾಣಿಕೆ, ದೇಶಿಯ ತಳಿಯ ವಿನಾಶ, ಪರಿಸರದ ಮೇಲಿನ ದುಷ್ಪರಿಣಾಮವನ್ನು ತಡೆಯಬೇಕು. ಪಿಎಚ್‌ಡಿ ಮತ್ತು ಎಂಫಿಲ್‌ ಅಧ್ಯಯನ ಮಾಡುವ ಅಲ್ಪಸಂಖ್ಯಾಕ ವಿದ್ಯಾರ್ಥಿಗಳಿಗೆ ಮಾಸಿಕ 25 ಸಾವಿರ ಶಿಷ್ಯ ವೇತನವನ್ನು ರದ್ದುಗೊಳಿಸಬೇಕು. ಇದು ರಾಜ್ಯ ಸರಕಾರವು ಅಲ್ಪಸಂಖ್ಯಾಕರನ್ನು ಓಲೈಸಲು, ಬಹುಸಂಖ್ಯಾಕ ಅನ್ಯ ಸಮುದಾಯದ ವಿದ್ಯಾರ್ಥಿಗಳಿಗೆ  ಮಾಡಿದ ಘೋರ ಅನ್ಯಾಯವಾಗಿದೆ ಮತ್ತು ಸಂವಿಧಾನಬಾಹಿರವಾಗಿದೆ.

ಗೋ ಸಂತತಿ ರಕ್ಷಿಸಿ
ಚಾಮರಾಜನಗರದ ಕೊಳ್ಳೆಗಾಲದ ಮಲೆ ಮಹಾದೇಶ್ವರ ಬೆಟ್ಟದಲ್ಲಿ ಹಸುಗಳು ಮೇಯುವ ಸುಮಾರು 150 ಎಕ್ರೆ ಜಮೀನಿನಲ್ಲಿ ಪರಿಸರ ಹಾನಿಯ ನೆಪದಲ್ಲಿ ಬೇಲಿ ಹಾಕಿದೆ. ಇದರಿಂದ 4,000 ಹಸು ಗಳಿಗೆ ಮೇವು ಇಲ್ಲದೇ, ಸಾಯುವ ಸ್ಥಿತಿಯಲ್ಲಿ ಇವೆ. ಆದ್ದರಿಂದ ಸರಕಾರವು ಕೂಡಲೇ ಬೇಲಿಯನ್ನು ತೆಗೆದು ಹಾಕಬೇಕು ಮತ್ತು ಗೋವುಗಳ ರಕ್ಷಣೆ, ಪಾಲನೆ ಮತ್ತು ಪೋಷಣೆಗೆ ಸಾಕಷ್ಟು ಆರ್ಥಿಕ ಸಹಾಯ ಮತ್ತು ಮೇವು ಒದಗಿಸುವ ಮೂಲಕ ರೈತರಿಗೆ ಮತ್ತು ಗೋಶಾಲೆಗಳಿಗೆ ಸಹಾಯವನ್ನು ನೀಡಬೇಕು ಮತ್ತು ಅಲ್ಲಲ್ಲಿ  ಗೋಮಾಳಗಳನ್ನು ನಿರ್ಮಿಸಿ ಗೋಸಂತತಿಯ ಪಾಲನೆಗೆ ಗಮನ ನೀಡಬೇಕು ಎಂದು ಮನವಿಯ ಮೂಲಕ ಸಮಿತಿಯು ಆಗ್ರಹಿಸಿದೆ.

ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಕೃಷ್ಣಕುಮಾರ್‌ ಶರ್ಮ, ಚಂದ್ರಶೇಖರ, ರಮೇಶ, ಕೇಶವ ಗೌಡ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next