Advertisement

ಪೊಲೀಸ್‌ ಸಿಬ್ಬಂದಿಗೆ ಆಯುಕ್ತರ ಶುಭಾಶಯ

12:56 AM Sep 16, 2019 | Lakshmi GovindaRaju |

ಬೆಂಗಳೂರು: ನಗರ ವ್ಯಾಪ್ತಿಯಲ್ಲಿರುವ ಪೊಲೀಸ್‌ ಸಿಬ್ಬಂದಿ ಮತ್ತು ಅಧಿಕಾರಿಗಳ ಹುಟ್ಟಹಬ್ಬದ ದಿನ ಕಡ್ಡಾಯ ರಜೆ ಘೋಷಿಸಿ, ಅವರಿಗೆ ಶುಭಾಶಯದ ಕಾರ್ಡ್‌(ಗ್ರೀಟಿಂಗ್ಸ್‌) ಕಳುಹಿಸುವುದಾಗಿ ಹೇಳಿದ್ದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಭಾನುವಾರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡ 15ಕ್ಕೂ ಹೆಚ್ಚು ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಸಣ್ಣ ಕಾರ್ಯಕ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿಯಿಂದಲೇ ಕೇಕ್‌ ಕತ್ತರಿಸಿ, ಸಿಹಿ ಹಂಚಿಸಿದರು.

Advertisement

ಬಳಿಕ ಎಲ್ಲರಿಗೂ ಗ್ರೀಟಿಂಗ್ಸ್‌ ನೀಡಿ ಶುಭ ಕೋರಿದರು. ಈ ಕ್ಷಣಗಳ ಫೋಟೋಗಳನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡಿರುವ ಅವರು, “ಖಾಕಿಯಲ್ಲಿನ ಅದ್ಬುತ ಕ್ಷಣಗಳು’ “ನನ್ನ ಪೊಲೀಸ್‌ ಕುಟುಂಬದಲ್ಲಿ ಈ ದಿನದಂದು ಹುಟ್ಟಿದ ಸಿಬ್ಬಂದಿಯ ಹುಟ್ಟುಹಬ್ಬವನ್ನು ಆಚರಿಸಿದ ಕ್ಷಣಗಳು. ಈ ಉಪಕ್ರಮದ ಪ್ರಾರಂಭವು, ಕನ್ನಡಿಗ ಭಾರತರತ್ನ ಸರ್‌ಎಂ.ವಿಶ್ವೇಶ್ವರಯ್ಯ ಅವರ ಜನ್ಮ ದಿನದಂದು ಘಟಿಸಿರುವುದು ಮತ್ತೊಂದು ವಿಶೇಷ’ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next