Advertisement

ಸಿಲಿಕಾನ್‌ ಸಿಟಿಯಲ್ಲಿ ಅಧಿಕಾರಿಗಳ ದಾಳಿ;ಭಾರೀ GST ವಂಚನೆ ಪತ್ತೆ !

10:15 AM Sep 26, 2018 | |

ಬೆಂಗಳೂರು:ನಗರದ ವಿವಿಧೆಡೆ ಬುಧವಾರ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು,  ಭಾರೀ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

Advertisement

ಟಿ.ದಾಸರಹಳ್ಳಿ, ಚಿಕ್ಕಬಾಣಾವರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೇರೆ ವ್ಯಕ್ತಿಗಳ ಹೆಸರಿನಲ್ಲಿ 12 ಕಂಪೆನಿಗಳನ್ನು ನಡೆಸುತ್ತಿದ್ದ  ವಿಕ್ರಮ್‌ ದುಗಾಲ್‌ ಮತ್ತು ಮೂವರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. 

ಅಧಿಕಾರಿಗಳು ಸುಮಾರು 203 ಕೋಟಿ ರೂಪಾಯಿ ತೆರಿಗೆ ವಂಚನೆಯ ನಕಲಿ ಬಿಲ್‌ಗ‌ಳನ್ನು  ಪತ್ತೆ ಹಚ್ಚಿರುವ ಬಗ್ಗೆ ವರದಿಯಾಗಿದೆ. 

ದಾಳಿ ವೇಳೇ ಹಲವು ದಾಖಲೆಗಳು, ಕಡತಗಳು ಮತ್ತು ಲ್ಯಾಪ್‌ಟಾಪ್‌ಗಳು  ಪತ್ತೆಯಾಗಿದ್ದು, ಪರಿಶೀಲನೆ ಮುಂದುವರಿದಿದೆ. ವಂಚನೆಯ ಕಿಂಗ್‌ಪಿನ್‌ ವಿಕ್ರಮ್‌ ದುಗಾಲ್‌ ಎಂದು ತಿಳಿದು ಬಂದಿದೆ. 

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next