Advertisement

ಕರ್ನಾಟಕದಿಂದ ಬಂದಿದ್ದು 111 ಟಿಎಂಸಿ ನೀರು: ಪಳನಿಸ್ವಾಮಿ

07:55 AM Jan 11, 2018 | |

ಚೆನ್ನೈ: “ನಿಯಮದ ಪ್ರಕಾರ ಕರ್ನಾಟಕವು ನಮಗೆ ವರ್ಷಕ್ಕೆ 192 ಟಿಎಂಸಿ ಕಾವೇರಿ ನೀರನ್ನು ಬಿಡಬೇಕು. ಆದರೆ, ಈವರೆಗೆ ಅವರು ನೀಡಿದ್ದು ಕೇವಲ 111 ಟಿಎಂಸಿ ಮಾತ್ರ. ಹಾಗಾಗಿ, ಉಳಿದ ನೀರನ್ನೂ ನೀಡುವಂತೆ ಮಾಡಲು ಕ್ರಮ ಕೈಗೊಳ್ಳುತ್ತೇವೆ.’

Advertisement

ಹೀಗೆಂದು ಹೇಳಿದ್ದು ತಮಿಳುನಾಡು ಸಿಎಂ ಪಳನಿಸ್ವಾಮಿ. ಬುಧವಾರ ಕಾವೇರಿ ಜಲವಿವಾದ ನ್ಯಾಯಾಧಿಕರಣ 2007ರಲ್ಲಿ ನೀಡಿದ್ದ ತೀರ್ಪನ್ನು ಉಲ್ಲೇಖೀಸಿ ಮಾತನಾಡಿದ ಪಳನಿಸ್ವಾಮಿ, “ವರ್ಷಕ್ಕೆ 192 ಟಿಎಂಸಿ ಕಾವೇರಿ ನೀರನ್ನು ತಮಿಳುನಾಡಿಗೆ ಕರ್ನಾಟಕ ಹರಿಸಬೇಕು ಎಂದು ನ್ಯಾಯಾಧಿಕರಣ ಆದೇಶಿಸಿದೆ. ಆದರೆ, ಕರ್ನಾಟಕ
111 ಟಿಎಂಸಿ ನೀರನ್ನಷ್ಟೇ ಬಿಟ್ಟಿದ್ದು, ಇನ್ನೂ 81 ಟಿಎಂಸಿ ನೀರು ಹರಿಸಲು ಬಾಕಿ ಇದೆ. ಅದನ್ನು ಮೇ ತಿಂಗಳೊಳಗೆ ಹರಿಸುವಂತೆ ಕರ್ನಾಟಕವನ್ನು ಕೇಳಿಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಮೂಲಕವೂ ಇದನ್ನು ಕೇಳಿಸಲಾಗುತ್ತಿದೆ,’ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next