Advertisement

ಶಾಂತಿಯಿಂದ ಬಂದು ನಿಮ್ಮ ಸೈನಿಕರ ದೇಹ ಕೊಂಡು ಹೋಗಿ

05:30 PM Aug 05, 2019 | keerthan |

ಹೊಸದಿಲ್ಲಿ: ಭಾರತದ ಗಡಿಯೊಳಗೆ ನುಗ್ಗುವ ವಿಫಲ ಪ್ರಯತ್ನ ಮಾಡಿ ಭಾರತೀಯ ಸೇನೆಯಿಂದ ಹತರಾದ ಸೈನಿಕರ ಮೃತದೇಹವನ್ನು ಪಾಕ್‌ ಗೆ ಕೊಂಡೊಯ್ಯುವಂತೆ ಭಾರತೀಯ ಸೇನೆ ತಿಳಿಸಿದೆ.

Advertisement

ಶಸ್ತ್ರ ಕೆಳಗಿಟ್ಟು ಶಾಂತಿಯಿಂದ ಬಂದು ನಿಮ್ಮ ಸೈನಿಕರ ದೇಹ ಕೊಂಡುಹೋಗಿ ಎಂದು ಸೇನೆ ಪಾಕ್‌ ಗೆ ತೀಕ್ಷ್ಣವಾಗಿ ಹೇಳಿದೆ.

ಜುಲೈ 31ರಂದು ಗಡಿಯಲ್ಲಿ ಒಳನುಸುಳುತ್ತಿದ್ದ ಪಾಕಿಸ್ಥಾನದ ಗಡಿ ರಕ್ಷಣಾ ಪಡೆಯ ಸೈನಿಕರನ್ನು ಭಾರತೀಯ ಸೇನೆ ಹೊಡೆದುರುಳಿಸಿತ್ತು. ಐದರಿಂದ ಏಳು ಮಂದಿ ಪಾಕ್‌ ಸೈನಿಕರು ಹತರಾಗಿದ್ದರು ಎಂದು ವರದಿಯಾಗಿತ್ತು.

ಭಾರತೀಯ ಸೇನೆಯ ಈ ಸಂದೇಶಕ್ಕೆ ಪಾಕಿಸ್ಥಾನದಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಜುಲೈ 31ರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಕೇರಾನ್‌ ಸೆಕ್ಟರ್‌ ನಲ್ಲಿ ಭಾರತೀಯರ ಸೈನಿಕರು ಈ ಕಾರ್ಯಾಚರಣೆ ನಡೆಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next