Advertisement

ಬನ್ನಿ, ನಿಖಿಲ್‌ ಪರ ಬೆಟ್‌ ಕಟ್ಟಿ ಎಂದ ಶಾಸಕ

11:25 PM May 11, 2019 | Team Udayavani |

ಮಂಡ್ಯ: ಯಾರು ಬೇಕಾದರೂ ಬೆಟ್‌ ಕಟ್ಟಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಖಿಲ್‌ ಗೆಲುವು ನಿಶ್ಚಿತ ಎಂದು ಕೆ.ಆರ್‌.ಪೇಟೆ ಶಾಸಕ ಕೆ.ಸಿ.ನಾರಾಯಣಗೌಡರು ವಿಶ್ವಾಸದಿಂದ ಹೇಳಿದ್ದಾರೆ.

Advertisement

ನಗರದಲ್ಲಿ ಪುರಸಭಾ ಚುನಾವಣೆ ಸಂಬಂಧ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, “ನಾವು ಈಗಾಗಲೇ ಚುನಾವಣೆ ಗೆದ್ದಾಗಿದೆ. ಇದಕ್ಕಾಗಿ ನಿಖಿಲ್‌ಗೆ ಸನ್ಮಾನ ಸಮಾರಂಭವನ್ನು ಕೂಡ ಇಟ್ಟುಕೊಂಡಿದ್ದೇವೆ. ನಿಖಿಲ್‌ ಪರ ಬೆಟ್ಟಿಂಗ್‌ ಕಟ್ಟಲು ನಾನು ರೆಡಿ ಇದ್ದೇನೆ. ಯಾರು ಬೇಕಾದರೂ ಬರಬಹುದು’ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ.

ಬೆಟ್‌ ಅಂದಾಕ್ಷಣ ಕೋಟಿ, ಲಕ್ಷಾಂತರ ರೂ.ಕಟ್ಟಬೇಕಿಲ್ಲ. ನೂರೊಂದು ರೂ.ಕಟ್ಟಿದರೂ ಸಾಕು. ನಿಖಿಲ್‌ ಗೆಲುವು ಖಚಿತ. ಮೇ 23ರಂದು ಜೆಡಿಎಸ್‌ನವರು ದೊಡ್ಡಮಟ್ಟದ ಸಂಭ್ರಮಾಚರಣೆ ನಡೆಸಲಿದ್ದಾರೆ. ಈ ಬಗ್ಗೆ ಯಾವ ಅನುಮಾನವೂ ಇಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next