Advertisement

ಬೈಕ್‌ನಲ್ಲಿ ಬಂದು ಸರ ಕಸಿದು ಪರಾರಿ

11:46 PM Jun 12, 2023 | Team Udayavani |

ಕಾಪು: ಬೈಕ್‌ನಲ್ಲಿ ಹಿಂಬಾಲಿಸಿಕೊಂಡು ಬಂದ ಕಳ್ಳರು ಮದುವೆಗೆ ಹೋಗಿ ವಾಪಸಾಗುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಚೈನ್‌ ಎಗರಿಸಿ ಪರಾರಿಯಾದ ಘಟನೆ ಸೋಮವಾರ ಕಾಪುವಿನಲ್ಲಿ ನಡೆದಿದೆ.

Advertisement

ಕಾಪು ಬ್ರಾಹ್ಮಣರ ತೋಟ ನಿವಾಸಿ ಶಕುಂತಳಾ ಅವರು ಮದುವೆಗೆ ಹೋಗಿ ವಾಪಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಅಂದಾಜು ಎಂಟು ಪವನ್‌ ತೂಕದ ಎರಡು ಚಿನ್ನದ ಸರ ಕಳೆದುಕೊಂಡಿದ್ದಾರೆ.

ಶಕುಂತಳಾ ಅವರು ರಾ.ಹೆ. 66ರ ಪಕ್ಕದ ಸರ್ವೀಸ್‌ ರಸ್ತೆಯಲ್ಲಿ ನಡೆದುಕೊಂಡು ಬಂದು, ಮಾರಿಗುಡಿ ದರ್ಶನ ಪಾತ್ರಿಗಳ ಮನೆ ಬಳಿಯಿಂದ ರಸ್ತೆಯಲ್ಲಿ ಮನೆಗೆ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ಬೈಕ್‌ ಸವಾರರು ಕುತ್ತಿಗೆಗೆ ಕೈ ಹಾಕಿ ಸರವನ್ನು ಎಗರಿಸಿದ್ದರು. ಅವರು ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಬಂದು ನೋಡುವಷ್ಟರಲ್ಲಿ ಕಳ್ಳರು ಬೈಕ್‌ನೊಂದಿಗೆ ಪರಾರಿಯಾಗಿದ್ದರು. ಸ್ಥಳೀಯ ಯುವಕನೋರ್ವ ಬೈಕ್‌ನಲ್ಲಿ ಚೇಸ್‌ ಮಾಡುವ ಪ್ರಯತ್ನ ಮಾಡಿದ್ದಾನಾದರೂ, ಕಳ್ಳರು ತಪಿಸ್ಪಿಕೊಂಡು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾಪು ಪೊಲೀಸ್‌ ವೃತ್ತ ನಿರೀಕ್ಷಕ ಕೆ.ಸಿ. ಪೂವಯ್ಯ, ಕಾಪು ಎಸ್ಸೆ$ç ಶ್ರೀಶೈಲ ಮುರಗೋಡ ಮತ್ತು ಸಿಬಂದಿ ಸ್ಥಳಕ್ಕೆ ಧಾವಿಸಿದ್ದು, ಸರಕಳ್ಳರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬ್ರಹ್ಮಾವರ: ಮಂಗಳಸೂತ್ರ ಸೆಳೆದು ಬೈಕ್‌ನಲ್ಲಿ ಪರಾರಿ
ಬ್ರಹ್ಮಾವರ: ಇಲ್ಲಿನ ರಕ್ತೇಶ್ವರೀ ಮಾರ್ಗದಲ್ಲಿ ಸೋಮವಾರ ಮಹಿಳೆಯ ಕುತ್ತಿಗೆಯಲ್ಲಿದ್ದ ಮಂಗಳಸೂತ್ರವನ್ನು ಎಳೆದು ಪರಾರಿಯಾದ ಘಟನೆ ನಡೆದಿದೆ. ಪಾರ್ವತಿ ಅವರು ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದು, ವಾರದ ಸಂತೆಯಲ್ಲಿ ಸಾಮಗ್ರಿ ಖರೀದಿಸಿ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಓರ್ವ ವ್ಯಕ್ತಿ ಮಂಗಳ ಸೂತ್ರ ಎಳೆದುಕೊಂಡು ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಬೈಕ್‌ನಲ್ಲಿ ಇನ್ನೋರ್ವ ಆರೋಪಿಯೊಂದಿಗೆ ಪರಾರಿಯಾಗಿದ್ದಾನೆ. ಸೊತ್ತಿನ ಮೌಲ್ಯ ಅಂದಾಜು 1,80,000 ರೂ. ಆಗಿರುವುದಾಗಿ ಬ್ರಹ್ಮಾವರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next