Advertisement

ಬೆಳಗ್ಗೆ ಮನೆಗೆ ಬನ್ನಿ ಎಂದಿದ್ದ ಸುಷ್ಮಾ: ಸಾಳ್ವೆ ದುಃಖ

03:18 AM Aug 07, 2019 | Team Udayavani |

ನೀವು ಭಾರತಕ್ಕಾಗಿ ಪ್ರಕರಣ ಗೆದ್ದಿದ್ದೀರಿ. ಅದಕ್ಕಾಗಿ ಶುಲ್ಕ ಪಾವತಿ ಮಾಡಬೇಕಾಗಿದೆ. ಬುಧವಾರ ಬೆಳಗ್ಗೆ 6 ಗಂಟೆಗೆ ಬನ್ನಿ ಎಂದಿದ್ದರು ಸುಷ್ಮಾ.

Advertisement

ನಿಮ್ಮನ್ನು ನಾನು ಭೇಟಿಯಾಗಬೇಕು. ಕುಲಭೂಷಣ ಜಾಧವ್‌ ಪ್ರಕರಣವನ್ನು ಗೆದ್ದಿದ್ದೀರಿ. ಅದಕ್ಕಾಗಿ 1 ರೂ. ಶುಲ್ಕ ಪಾವತಿ ಮಾಡಬೇಕಿದೆ. ಅದಕ್ಕಾಗಿ ಬುಧವಾರ ಬೆಳಗ್ಗೆ ಬನ್ನಿ ಎಂದು ಹೇಳಿದ್ದರು ಈಗ ಅವರೇ ಇಲ್ಲ ಎಂದು ಹಿರಿಯ ನ್ಯಾಯವಾದಿ ಹರೀಶ್‌ ಸಾಳ್ವೆ ಶೋಕ ವ್ಯಕ್ತಪಡಿಸಿದ್ದಾರೆ. ವಿಯೆನ್ನಾದಲ್ಲಿ ಜಾಧವ್‌ ವಿರುದ್ಧದ ಪ್ರಕರಣದಲ್ಲಿ ಭಾರತದ ಪರವಾಗಿ ವಾದ ಮಂಡಿಸಿ ಗೆದ್ದಿದ್ದಾಗ ತಮಗೆ ಅಭಿನಂದನೆ ಸಲ್ಲಿಸಿದ್ದರು ಎಂದು ನೆನಪಿಸಿಕೊಂಡಿದ್ದಾರೆ. ಇದೀಗ ಅವರೇ ಇಲ್ಲವಾಗಿದ್ದಾರೆ ಎಂದು ದುಃಖೀಸಿದ್ದಾರೆ. ಜತೆಗೆ ಟ್ವೀಟ್ ಮಾಡಿ ತಮಗೆ ಧನ್ಯವಾದ ಸಮರ್ಪಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

ಮಂಗಳವಾರ ರಾತ್ರಿ 8.50ಕ್ಕೆ ಅವರ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದೆ. ಸುಷ್ಮಾರ ಜತೆಗಿನ ಸಂಭಾಷಣೆ ಆತ್ಮೀಯವಾಗಿತ್ತು .ನೀವು ಭಾರತಕ್ಕಾಗಿ ಪ್ರಕರಣ ಗೆದ್ದಿದ್ದೀರಿ. ಅದಕ್ಕಾಗಿ ಅತ್ಯುಕೃಷ್ಟವಾದ ಶುಲ್ಕ ಪಾವತಿ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ಬುಧವಾರ ಬೆಳಗ್ಗೆ 6 ಗಂಟೆಗೆ ಬರುವಂತೆ ತಮಗೆ ಸೂಚಿಸಿದ್ದರು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next