Advertisement
ಇದು ಸ್ಪಾನಿಶ್ ಯುವತಿ ಮಾರ್ಥಾ ಮಾರ್ಟಿನ್ ಇಸ್ಲಸ್ ಅವರ ಅಭಿಮಾನದ ನುಡಿ. ಈ ಅಭಿಮಾನಕ್ಕೆ ಕಾರಣ ಅರಿವಾಗಬೇಕಾದರೆ ಈ ವರ್ಷದ ಜನವರಿಯಿಂದ ಆರಂಭಗೊಂಡ ಅವರ ಭಾರತ ಪ್ರವಾಸ ಹಠಾತ್ತಾಗಿ ಮಂಗಳೂರಿನಲ್ಲಿ ಹಾಸಿಗೆ ಹಿಡಿಯಿತೇಕೆ ಎಂಬುದನ್ನು ತಿಳಿಯಬೇಕು.
Related Articles
ಸುಕೇಶ್ ಮೂಲಕ ವಿಷಯ ತಿಳಿದ ಮಾರ್ಥಾಳ ತಾಯಿ ಡಾ| ಡಯಾನಾ ಇಸ್ಲಸ್ ಫೆ. 29ರಂದು ಮಂಗಳೂರಿಗೆ ಬಂದರು. ಬಲವಾದ ಪೆಟ್ಟು ಬಿದ್ದದ್ದರಿಂದ ಮಾರ್ಥಾಗೆ ನಾಲ್ಕು ರೀತಿಯ ಶಸ್ತ್ರಚಿಕಿತ್ಸೆಗಳು ನಡೆದವು.
Advertisement
ಹೊರಡುವಷ್ಟರಲ್ಲಿ ಲಾಕ್ಡೌನ್ ತಡೆಎ. 2ರಂದು ಕೊನೆಯ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ತಾಯಿ-ಪುತ್ರಿ ಸ್ಪೇನ್ಗೆ ಮರಳುವವರಿದ್ದರು. ಆದರೆ ಮಾ. 23ರಿಂದ ಆರಂಭವಾದ ಲಾಕ್ಡೌನ್ ತಡೆ ಯಾಯಿತು. ಹೀಗೆ ಮಂಗಳೂರಿನ ಆತಿಥ್ಯವನ್ನು ಅನಿವಾರ್ಯವಾದರೂ ಸಿಹಿಯಾಗಿ ಅನುಭವಿಸಿದ ಅವರು ಈಗ ಕರಾವಳಿಯ, ತುಳುನಾಡಿನವರ ಅಭಿಮಾನಿಗಳೇ ಆಗಿದ್ದಾರೆ; ತಮ್ಮ ಬದುಕಿನಲ್ಲೂ ಇಲ್ಲಿಯ ರೀತಿ ನೀತಿಗಳನ್ನು ಒಂದಿಷ್ಟು ಇಳಿಸಿಕೊಂಡಿದ್ದಾರೆ.
ಮಂಗಳೂರಿಗರು ಹೃದಯವಂತರು. ವೈದ್ಯರು, ನರ್ಸ್, ಸಿಬಂದಿ ಎಲ್ಲರೂ ಚೆನ್ನಾಗಿ ನೋಡಿ ಕೊಂಡಿದ್ದಾರೆ. ಮನೆಯಲ್ಲಿ ಉಳಿದುಕೊಳ್ಳಲು ಜಾಗ ಒದಗಿಸಿ, ಆತಿಥ್ಯ ನೀಡಿದ ನಿರ್ಮಲಾ ಜೈನ್ರಿಗೆ ಋಣಿಯಾಗಿದ್ದೇವೆ ಎಂದು “ಉದಯವಾಣಿ’ ಜತೆಗೆ ಕೃತಜ್ಞತೆಯ ಮಾತು ಹಂಚಿಕೊಂಡರು ಮಾರ್ಥಾ.ತಾಯಿ-ಮಗಳು ಗುರುವಾರ ಬೆಂಗಳೂರಿಗೆ, ಶುಕ್ರವಾರ ಪ್ಯಾರಿಸ್ ಮುಖಾಂತರ ಸ್ಪೇನ್ಗೆ ಪ್ರಯಾಣ ಬೆಳೆಸಿದ್ದಾರೆ. ಕೋವಿಡ್-19 ಹೆಚ್ಚಾದಾಗ ಆತಂಕ
ಭಾರತದಲ್ಲಿ ಕೋವಿಡ್-19 ಹೆಚ್ಚಾಗುತ್ತಿದ್ದಂತೆ ಸಹಜವಾಗಿಯೇ ಆತಂಕ ಆರಂಭವಾಗಿತ್ತು. ಕೊನೆಗೂ ತಾಯ್ನಾಡಿಗೆ ಮರಳುವ ದಿನ ಬಂದಿರುವುದಕ್ಕೆ ಖುಷಿಯಾಗುತ್ತಿದೆ. ಮಂಗಳೂರಿಗರಿಗೆ ತುಂಬು ಹೃದಯದ ಧನ್ಯವಾದ.
-ಡಾ| ಡಯಾನಾ ಇಸ್ಲಸ್ ನಾರೀಸ್, ಮಾರ್ಥಾರ ತಾಯಿ