Advertisement

ಬಾನಂಗಳದಲ್ಲಿ ಬಣ್ಣ ಬಣ್ಣದ ಗಾಳಿಪಟಗಳ ಚಿತ್ತಾರ

04:21 PM Aug 01, 2018 | |

ಮಳವಳ್ಳಿ: ಬಾನಂಗಳದಲ್ಲಿ ಮಕ್ಕಳ ನೂರಾರು ಬಣ್ಣ-ಬಣ್ಣದ ಗಾಳಿಪಟಗಳ ಚಿತ್ತಾರ ನೋಡುಗರ ಹಾಗೂ ಭಾಗವಹಿಸಿದ್ದ ಮಕ್ಕಳ ಮನಸೂರೆಗೊಂಡಿತು. ಪಟ್ಟಣದ ಶಾಂತಿ ಕಾಲೇಜಿನ ಮುಂಭಾಗದ ಪುರಸಭೆ ನಿವೇಶನದಲ್ಲಿ ತಾಲೂಕು ಗಾಳಿಪಟ ಸ್ಪರ್ಧೆ ಸಮಿತಿ ಆಯೋಜಿಸಿದ್ದ ತಾಲೂಕು ಮಟ್ಟದ ಗಾಳಿಪಟ ಸ್ಪರ್ಧೆಯಲ್ಲಿ ಕಂಡುಬಂದ ದೃಶ್ಯವಿದು.

Advertisement

ಗಾಳಿ ಪಟ ಹಾರಿಸಿದ ಶಾಸಕ: ತಾಲೂಕಿನ ವಿವಿಧ ಶಾಲೆಗಳಿಂದ ಅಗಮಿಸಿದ ಮಕ್ಕಳು ಬಣ್ಣ-ಬಣ್ಣದಿಂದ ರಚಿಸಿದ ಗಾಳಿಪಟ ನೋಡಲು ಪಟ್ಟಣದ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಶಾಸಕ ಡಾ. ಕೆ.ಅನ್ನದಾನಿ ಗಾಳಿಪಟ ಹಾರಿಸಿ ಸ್ಪರ್ಧೆಗೆ ವಿಧ್ಯುಕ್ತ ಚಾಲನೆ ನೀಡಿದರು. ತಾವೂ ಪ್ರೇಕ್ಷಕರಂತೆ ಭಾಗವಹಿಸಿ ಮಕ್ಕಳ ಕ್ರೀಡೆ ವೀಕ್ಷಣೆ ಮಾಡಿದರು.

ಗ್ರಾಮೀಣ ಕ್ರೀಡೆ: ಇದೇ ಸಂದರ್ಭದಲ್ಲಿ ಗಾಳಿಪಟ ಸ್ಪರ್ಧೆ ಸಮಿತಿ ಅಧ್ಯಕ್ಷ ಎನ್‌.ಎಂ.ಮಲ್ಲೇಶ್‌ ಮಾತನಾಡಿ, ಗ್ರಾಮೀಣ ಕ್ರೀಡೆಗಳನ್ನು ಉಳಿಸಿ-ಬೆಳೆಸುವುದು ನಮ್ಮೆಲ್ಲರ ಕರ್ತವ್ಯ. ಈ ದಿಸೆಯಲ್ಲಿ ಕಳೆದ 5 ವರ್ಷದಿಂದ ಗಾಳಿಪಟ ಸ್ಫರ್ಧೆ ಆಯೋಜಿಸಿಕೊಂಡು ಬಂದಿದು, ಈ ವರ್ಷದಿಂದ ಅಳಿಗುಳಿ ಮಣೆ, ರಂಗೋಲಿ ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳಿನ್ನು ಆಯೋಜಿಸಲು ಮುಂದಾಗಿದ್ದೇವೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಸಿ.ಮಲ್ಲಿಕ್‌, ಸಮಿತಿಯ ಪದಾಧಿಕಾರಿಗಳು, ಉದ್ಯಮಿ ವೆಂಕಟೇಶ್‌, ಸಿಎಸ್‌ಪಿ ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ ಸೇರಿದಂತೆ ನೂರಾರು ಜನರು ಹಾಗೂ ವಿವಿಧ ಶಾಲೆಗಳಿಂದ ಅಗಮಿಸಿದ್ದ ನೂರಾರು ಮಕ್ಕಳು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next