Advertisement

ಕಾರುಗಳ ಡಿಕ್ಕಿ: ನಾಲ್ವರ ದುರ್ಮರಣ

06:45 AM Sep 28, 2018 | Team Udayavani |

ಬಂಗಾರಪೇಟೆ: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕೋಲಾರ ರಸ್ತೆಯ ಅನಿಗಾನಹಳ್ಳಿ ಗೇಟ್‌ ಬಳಿ ಟಾಟಾ ಸುಮೋ ಹಾಗೂ ಇಂಡಿಕಾಕಾರಿನ ನಡುವೆ ಸಂಭವಿಸಿದ ಮುಖಾಮುಖೀ ಡಿಕ್ಕಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. 

Advertisement

ಮೃತರನ್ನು ಕೆಜಿಎಫ್ನ ಚಾಂಪಿಯನ್‌ ರೀಪ್ಸ್‌ನ ಭರತ್‌ ಕುಮಾರ್‌(24), ಬಾಬು (30), ರಿಕೋ(28) ಹಾಗೂ ರಮೇಶ್‌ಬಾಬು(35)
ಎಂದು ಗುರುತಿಸಲಾಗಿದೆ. 

ಸೇನಾಯೋಧ ಭರತ್‌ ಕುಮಾರ್‌ ಅವರನ್ನು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಿಟ್ಟು ಬರಲು ಇವರೆಲ್ಲರೂ
ಇಂಡಿಕಾ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಕೋಲಾರ ರಸ್ತೆ ಅನಿಗಾನಹಳ್ಳಿ ಗ್ರಾಮದ ಗೇಟ್‌ ಬಳಿ ಕೋಲಾರ ಕಡೆಯಿಂದ ವೇಗವಾಗಿ ಬಂದ ಟಾಟಾ ಸುಮೋ ಡಿಕ್ಕಿ ಹೊಡೆಯಿತು. ಇಂಡಿಕಾ ಕಾರು ಪಲ್ಟಿಯಾಗಿ ನಾಲ್ವರೂ ಸ್ಥಳದಲ್ಲೇ ಅಸುನೀಗಿದರು. ಟಾಟಾ ಸುಮೋದಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿದ್ದು, ಕೋಲಾರದ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next