Advertisement

ಎರಡು ಬೈಕ್ ಗಳ ನಡುವೆ ಢಿಕ್ಕಿ: ಸ್ಥಳದಲ್ಲೇ ಮೂವರು ಸಾವು!

11:00 AM Dec 24, 2021 | Team Udayavani |

ದಾವಣಗೆರೆ: ಎರಡು ಬೈಕ್ ಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಹೊನ್ನಾಳಿ ತಾಲೂಕಿನ ತಕ್ಕನಹಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

Advertisement

ಬಸವಾಪಟ್ಟಣದ ಕೋಟೆಹಾಳ್ ಗ್ರಾಮದ ತಂದೆ ಮಹೇಶಪ್ಪ ಹಾಗೂ ಸಂಜು ಹಾಗೂ ಮತ್ತೊಂದು ಬೈಕ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸವಾರ ದಿಡಗೂರಿನ ಪ್ರಶಾಂತ್ ಮೃತಪಟ್ಟ ದುರ್ದೈವಿಗಳು. ಆನಂದ್ ಎಂಬಾತನಿಗೆ ತೀವ್ರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 6,650 ಕೋವಿಡ್ ಪ್ರಕರಣ ಪತ್ತೆ, 374 ಮಂದಿ ಸಾವು

ದೇವರಹೊನ್ನಾಳಿ-ತಕ್ಕನಹಳ್ಳಿ ಗ್ರಾಮಗಳ ನಡುವಿನ ಸವಳಂಗ-ಬಸವಾಪಟ್ಟಣ ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಹೊನ್ನಾಳಿ ತಾಲೂಕಿನ ದಿಡಗೂರು ಹಾಗೂ ಹರಳಹಳ್ಳಿ ಅವರಾದ ಪ್ರಶಾಂತ್, ಆನಂದ್ ತಮ್ಮೂರಿನತ್ತ ಹೊರಟಿದ್ದರು. ನ್ಯಾಮತಿ ತಾಲೂಕಿನ ಕೋಟೆಹಾಳ್-ಮರಿಗೊಂಡನಹಳ್ಳಿ ಗ್ರಾಮದವರಾದ ಮಹೇಶಪ್ಪ ಮತ್ತು ಸಂಜು ಸಹ ಬೈಕ್ ನಲ್ಲಿ ಬರುತ್ತಿದ್ದರು. ಈ ವೇಳೆ ಎರಡು ಬೈಕ್ ಗಳ ನಡುವೆ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಮೂವರು ಸ್ಥಳದಲ್ಲಿ ಅಸುನೀಗಿದ್ದಾರೆ.

ಅಪಘಾತದ ಸುದ್ದಿ ತಿಳಿದ ಕೂಡಲೇ ಸಬ್ ಇನ್ ಸ್ಪೆಕ್ಟರ್ ಬಸನಗೌಡ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next