Advertisement

ವರ್ಕಾಡಿ:  ಕಾರಿನಲ್ಲಿ ಬಂದ ತಂಡದಿಂದ ಕಾಲೇಜು ವಿದ್ಯಾರ್ಥಿಯ ಅಪಹರಣ

09:01 AM Jul 23, 2019 | Team Udayavani |

ಮಂಜೇಶ್ವರ: ಕಾಲೇಜಿಗೆಂದು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಕಳಿಯೂರು ಕೋರಿಕ್ಕಾರ್ ನಿವಾಸಿ, ಕೊಲ್ಲಿ ಉದ್ಯೋಗಿ ಹಸನ್ ಕುಂಞಿ ಅವರ ಪುತ್ರ ಅಬ್ದುಲ್ ರಹಮಾನ್ ಹಾರೀಸ್ ನನ್ನು (17) ಕಾರಿನಲ್ಲಿ ಬಂದ ತಂಡವೊಂದು ವರ್ಕಾಡಿ ಸಮೀಪದ ಕಳಿಯೂರಿನಿಂದ ಅಪಹರಿಸಿದೆ.

Advertisement

ತೊಕ್ಕೊಟ್ಟು ಬೆಸೆಂಟ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಈತ ಸೋಮ ವಾರ ಬೆಳಗ್ಗೆ ಸ್ಕೂಟರ್‌ನಲ್ಲಿ ಸಹೋದರಿ ಜತೆಯಲ್ಲಿ ಸಂಚರಿಸುತ್ತಿದ್ದಾಗ ಅಪಹರಣ ಮಾಡಲಾಗಿದೆ.

ಸಹೋದರಿಯು ಧರ್ಮನಗರ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆಕೆಯನ್ನು ಕೂರಿಸಿಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಕಪ್ಪು ಬಣ್ಣದ ಕಾರೊಂದು ನಿಂತಿತ್ತು. ಅದರಲ್ಲಿದ್ದವರು ಹಾರೀಸ್‌ನಲ್ಲಿ ಆತನ ಅಜ್ಜನ ಮನೆಗೆ ತೆರಳುವ ದಾರಿ ಕೇಳಿದರು. ಈ ಸಮಯದಲ್ಲಿ ಓರ್ವನು ಹಾರೀಸ್‌ನನ್ನು ಬಲವಂತವಾಗಿ ಕಾರಿನೊಳಗೆ ಎಳೆದು ಹಾಕಿದ್ದು, ಬಳಿಕ ಕಾರು ಪರಾರಿಯಾಗಿದೆ ಎಂದು ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next