Advertisement

ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿ ಜನ್ಮದಿನ ಸಂಭ್ರಮಿಸಿದ ಯುವಕ!

08:17 PM Apr 06, 2021 | Team Udayavani |

ಸಾಗರ: ಇಲ್ಲಿನ ತಿಲಕ್‌ ರಸ್ತೆಯಲ್ಲಿನ ಬಂಗಾರದಂಗಡಿಯಲ್ಲಿ ಕೆಲಸ ಮಾಡುವ ಸೊರಬ ರಸ್ತೆಯ ವಾಸಿ ಸಂತೋಷ್‌ ಶೇಟ್‌ ತಮ್ಮ 28ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 5 ದಿನಗಳ ಕಾಲ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸುವ ಸಂಕಲ್ಪ ಮಾಡಿದ್ದಾರೆ.

Advertisement

ಸಂತೋಷ್‌ ಕಳೆದ ವರ್ಷ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಬ್ರೆಡ್‌ ಹಂಚಿದ್ದರು. ಈ ವರ್ಷ ಸೊರಬ ರಸ್ತೆ, ಗೋಪಾಲಗೌಡ ನಗರ ಇನ್ನಿತರ ಭಾಗಗಳಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿದ್ದಾರೆ.  ಸಂಗ್ರಹಿಸಿದ ತ್ಯಾಜ್ಯವನ್ನು ನಗರಸಭೆ ಕಸ ಸಂಗ್ರಹಣೆ ಕಾರ್ಮಿಕರಿಗೆ ಒಪ್ಪಿಸಿದ್ದಾರೆ.

ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಾ. 28ರಿಂದ ಪ್ರತಿದಿನ ಬೆಳಗ್ಗೆ 6ರಿಂದ 9 ಗಂಟೆಯವರೆಗೆ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿದ್ದೇನೆ. ಪ್ರತಿದಿನ 2-3 ಚೀಲದಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಸಂಗ್ರಹಿಸಿದ್ದೇನೆ. ನನ್ನ ಆರ್ಥಿಕ ಪರಿಸ್ಥಿತಿಯಲ್ಲಿ, ನನ್ನ ದೈಹಿಕ ಶ್ರಮ ಬಳಸಿ ಏನಾದರೂ ಒಳಿತನ್ನು ಮಾಡಬೇಕು ಎಂಬುದು ಮಾತ್ರ ನನ್ನ ಆಸೆ. ಪ್ರಚಾರ, ಜನಮನ್ನಣೆ ಸಹ ನನ್ನ ಉದ್ದೇಶವಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next