Advertisement

ಒತ್ತಿನೆಣೆ ಗುಡ್ಡ ಕುಸಿತ: ಕಾರವಾರ-ಉಡುಪಿ ಸಂಚಾರ ಸ್ಥಗಿತ

08:55 AM Jun 07, 2017 | |

ಬೈಂದೂರು: ಇಲ್ಲಿನ ಒತ್ತಿನೆಣೆ ಬಳಿ ಬುಧವಾರ ನಸುಕಿನ 4.30 ರ ವೇಳೆಗೆ ಹೆದ್ದಾರಿಯಲ್ಲಿ ಗುಡ್ಡ ಕುಸಿದು  ಬಿದ್ದು ನಿರಂತರ 5 ಗಂಟೆಗಳ ಕಾಲ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಘಟನೆ ನಡೆದಿದೆ. 

Advertisement

ಹೆದ್ದಾರಿ ಕಾಮಾಗಾರಿಗಾಗಿ ಗುಡ್ಡ ಕೊರೆಯಲಾಗಿದ್ದು, ಭಾರೀ ಮಳೆಯಿಂದಾಗಿ ಕುಸಿದು ಬಿದ್ದ ಪರಿಣಾಮ ಬೆಳಗ್ಗಿನಿಂದ ನೂರಾರು ವಾಹನ ಸವಾರರು ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು. 

ತೆರವು ಕಾರ್ಯಕ್ಕೆ ಮೀನ ಮೇಷ !

ಗುಡ್ಡ 4.30 ರ ವೇಳೆಗ ಕುಸಿದು ಬಿದ್ದರೆ ಸ್ಥಳಕ್ಕೆ ಕೇವಲ 3 ಜೆಸಿಬಿಗಳೊಂದಿಗೆ 7.30 ಕ್ಕೆ ಆಗಮಿಸಿ ತೆರವು ಕಾರ್ಯ ಆರಂಭಿಸಲಾಗಿದೆ. ಇದು ನೂರಾರು ವಾಹನ ಸವಾರರ ಆಕ್ರೋಶಕ್ಕೆ ಕಾರವಾಯಿತು. ಮಣ್ಣು ತೆರವು ಮಾಡಿ 9.30 ರ ವೇಳೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. 

Advertisement

ಭಟ್ಕಳ ಕಡೆ ಯಿಂದ ಬರುತ್ತಿರುವ ಮತ್ತು ತೆರಳುತ್ತಿರುವ ಬಸ್‌ಗಳು ಸೇರಿದಂತೆ ನೂರಾರು ವಾಹನಗಳ ಸವಾರರು ಪರದಾಡಬೇಕಾಯಿತು.

ಉದಯವಾಣಿ ಅಪಾಯದ ಎಚ್ಚರಿಕೆ ನೀಡಿತ್ತು

ಜೂನ್‌ 5 ರಂದು ಉದಯವಾಣಿ ಈ ಬಗ್ಗೆ ವರದಿ ಪ್ರಕಟಿಸಿ ಅಪಾಯದ ಎಚ್ಚರಿಕೆ ನೀಡಿತ್ತು. ಅದೃಷ್ಟವಷಾತ್‌ ಬೆಳಗಿನ ಜಾವ  ಗುಡ್ಡ ಕುಸಿದಿರುವ ಹಿನ್ನಲೆಯಲ್ಲಿ ಸಂಚಾರ ವಿರಳವಾಗಿದ್ದ ಕಾರಣ ಯಾವುದೇ ವಾಹನ ಸಿಲುಕಿಲ್ಲ.

ಸ್ಥಳೀಯರ ಆಕ್ರೋಶ 
ಈ ಬಗ್ಗೆ ಸ್ಥಳೀಯರು ಹೋರಾಟ ನಡೆಸಿದ್ದು, ಕಾಮಾಗಾರಿ ಕಳಪೆ ಮಾಡಲಾಗಿದ್ದು,ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ಅಧಿಕಾರಿಗಳು ಬೇಜಾವಾಬ್ಧಾರಿತನ ತೋರಿದ್ದು ಹೀಗಾಗಿದೆ ಎಂದು ಆರೋಪಿಸಿದ್ದಾರೆ. ಹೆದ್ದಾರಿ ಕಾಮಗಾರಿಯ ಕುರಿತು ಹಲವರು ತೀವ್ರ ಅಸಮಧಾನ ತೋಡಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next