Advertisement

ಉತ್ತಮ ಕೆಲಸ ಮಾಡಲು ಸಹಕರಿಸಿ

05:28 AM Jun 03, 2020 | Lakshmi GovindaRaj |

ಹುಣಸೂರು: ಹುಣಸೂರು ಎಸಿಎಫ್‌ ಪ್ರಸನ್ನಕುಮಾರ್‌ ವನ್ಯಜೀವಿ ಸಂರಕ್ಷಣೆ ಹಾಗೂ ಬೆಂಕಿ ನಿರ್ವಹಣೆ, ಕಚೇರಿಯಲ್ಲೂ ಉತ್ತಮ ಕೆಲಸ ಮಾಡಿದ ಶ್ರಮಜೀವಿ ಎಂದು ಡಿಸಿಎಫ್‌ ಮಹೇಶ್‌ಕುಮಾರ್‌ ಪ್ರಶಂಸಿಸಿದರು.

Advertisement

ನಾಗರಹೊಳೆಯಲ್ಲಿ ಡಿಸಿಎಫ್‌ ಆಗಿ ಬಡ್ತಿ ಪಡೆದು  ಮೈಸೂರಿಗೆ ವರ್ಗವಾಗಿರುವ ಪ್ರಸನ್ನಕುಮಾರ್‌, ನಿವೃತ್ತಿಯಾದ ಮೇಟಿಕುಪ್ಪೆ ಎಸಿಎಫ್‌ ಕೇಶವೇಗೌಡ ಹಾಗೂ ಆರು ಮಂದಿ ಅರಣ್ಯ ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದ ಅವರು,  ಡಿಸಿಎಫ್‌ ಆಗಿ ಪದೋನ್ನತಿ ಪಡೆದು ವರ್ಗವಾದರೂ ಕೆಲ ತಿಂಗಳು ಇಲ್ಲೇ ಉಳಿಸಿಕೊಳ್ಳಲಾಗಿತ್ತು ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಿಸಿಎಫ್‌ ಪ್ರಸನ್ನಕುಮಾರ್‌, ತಾವು ಹಲವೆಡೆ ಕೆಲಸ ಮಾಡಿದ್ದು, ವಿಶ್ವವಿಖ್ಯಾತ ನಾಗರಹೊಳೆ  ಉದ್ಯಾನವನದಲ್ಲಿ ಕೆಲಸ ಡಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ, ತಮ್ಮ ಅವಧಿಯಲ್ಲಿ ಎಲ್ಲ ಅಧಿಕಾರಿ, ಸಿಬ್ಬಂದಿ ಉತ್ತಮ ಸಹಕಾರ ನೀಡಿದ್ದಕ್ಕೆ ಧನ್ಯವಾದ ಹೇಳಿದರು. ನಿವೃತ್ತಿ ಹೊಂದಿದ ಮೇಟಿಕುಪ್ಪೆ ಎಸಿಎಫ್‌ ಕೇಶವೇಗೌಡ,  ನಾಗರಹೊಳೆ ಎಸಿಎಫ್‌ ಪೌಲ್‌ ಅಂಥೋಣಿ, ಹುಣಸೂರು ವಲಯದ ಆರ್‌ಎಫ್‌ಒ ಹನುಮಂತರಾಜು, ಸಿಬ್ಬಂದಿ ಸಿದ್ದಶೆಟ್ಟಿ, ಶಿವಸ್ವಾಮಿ, ಹುಚ್ಚಯ್ಯ, ಡಿ.ಬಿ.ಕುಪ್ಪೆ ವಲಯದ ಬಲ್ಲು ಹಾಗೂ ಆನೆಚೌಕೂರು ವಲಯದ ವಾಚರ್‌ ನಾಣಯ್ಯ,

ನಾಗರಹೊಳೆ ವಲಯದ ವಾಚರ್‌ ರಾಜುರನ್ನು  ಸನ್ಮಾನಿಸಿ, ಇದೇ ವೇಳೆ ಹುಣಸೂರು ವಲಯದ ನೂತನ ಎಸಿಎಫ್‌ ಸತೀಶ್‌ರನ್ನು ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಆರ್‌ಎಫ್‌ಒಗಳಾದ ರವೀಂದ್ರ, ಅಮಿತ್‌ಗೌಡ, ವಿನಯ್‌, ಗಿರೀಶ್‌,  ಸುಬ್ರಹ್ಮಣ್ಯ, ಸಂತೋಷ್‌ಕುಮಾರ್‌, ಶಿವಾನಂದ ನಿಂಗಾಣಿ ಹಾಗೂ ಡಿಆರ್‌ಎಫ್‌ಒಗಳು, ನ್ಯಾಚುರಲಿಸ್ಟ್‌ ಗೋಪಿ, ಅರಣ್ಯ ಸಿಬ್ಬಂದಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next