Advertisement

Napoklu; ಕಾಫಿ ಹಣ್ಣು ಕಾಡಾನೆ ಪಾಲು: ಆತಂಕದಲ್ಲಿ ಬೆಳೆಗಾರರು

11:51 PM Jan 08, 2024 | Team Udayavani |

ನಾಪೋಕ್ಲು: ಕೊಡಗು ಜಿಲ್ಲೆಯಲ್ಲಿ ಕೃಷಿಕರಿಗೆ ತಲೆನೋವಾಗಿ ಪರಿಣಮಿಸಿರುವ ಕಾಡಾನೆಗಳು ಇದೀಗ ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿ ಹಣ್ಣುಗಳನ್ನೂ ಸ್ವಾಹಾ ಮಾಡಲಾರಂಭಿಸಿದ್ದು, ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

Advertisement

ನಾಪೋಕ್ಲು ಸಮೀಪದ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು ರೈತರು ಆತಂಕಕ್ಕೆ ಈಡಾಗಿದ್ದಾರೆ. ಈ ಹಿಂದೆ ಕಾಡಾನೆಗಳು ಕಾಫಿ, ಅಡಿಕೆ, ತೆಂಗು ಫ‌ಲಭರಿತ ಗಿಡಗಳನ್ನು ಹಾಗೂ ಭತ್ತದ ಪೈರುಗಳನ್ನು ತುಳಿದು ನಾಶಪಡಿಸಿದ್ದರೆ ಇದೀಗ ಕಾಫಿಯ ಹಣ್ಣುಗಳನ್ನು ತಿನ್ನಲಾರಂಭಿಸಿವೆ.

ಆನೆಗಳ ಲದ್ದಿಯಲ್ಲಿ ಕಾಫಿ ಬೀಜಗಳು ಯಥೇತ್ಛವಾಗಿ ಕಂಡುಬರುತ್ತಿವೆ. ಮರಂದೋಡ ಗ್ರಾಮ ವ್ಯಾಪ್ತಿಯಲ್ಲಿ ನಾಲ್ಕಾರು ಆನೆಗಳು ಕೃಷಿ ನಾಶ ಮಾಡುತ್ತಿವೆ. ಅರಣ್ಯ ಅಧಿಕಾರಿಗಳಿಗೆ ಕಾಡಾನೆ ಗಳನ್ನು ಕಾಡಿಗಟ್ಟುವಂತೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಭತ್ತದ ಕಟಾವು ಮುಗಿದಿದ್ದು ಇದೀಗ ಕಾಡಾನೆಗಳು ತೋಟಕ್ಕೆ ನುಸುಳಿವೆ. ಕಾಫಿಯ ರೆಂಬೆಗಳನ್ನು ಮುರಿದು ಹಣ್ಣಾಗಿರುವ ಕಾಫಿಯನ್ನು ತಿಂದು ನಷ್ಟಪಡಿಸುತ್ತಿವೆ. ಸರಕಾರ ಸೂಕ್ತ ನಷ್ಟ ಪರಿಹಾರವನ್ನು ನೀಡಬೇಕೆಂದು ಗ್ರಾ.ಪಂ. ಸದಸ್ಯ ಚೋಯಮಾಡಂಡ ಹರೀಶ್‌ ಮೊಣ್ಣಪ್ಪ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next