Advertisement

ನೀತಿ ಸಂಹಿತೆ: 2ನೇ ಬಾರಿ ಅಂಬೇಡ್ಕರ್‌ ಜಯಂತಿಗೆ ನಿರ್ಧಾರ

04:48 PM Apr 19, 2017 | |

ಚಾಮರಾಜನಗರ: ಜಿಲ್ಲಾಡಳಿತದ ವತಿಯಿಂದ ಡಾ.ಬಿ. ಆರ್‌. ಅಂಬೇಡ್ಕರ್‌ ಅವರ 126ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏ. 28ರಂದು ನಗರದಲ್ಲಿ ಅದ್ಧೂರಿಯಾಗಿ ಹಮ್ಮಿಕೊಳ್ಳಲು ಹಾಗೂ ಅಂಬೇಡ್ಕರ್‌ ವಿಚಾರಧಾರೆಗಳ ಕುರಿತ ವಿಚಾರ ಸಂಕಿರಣವನ್ನು ಏ.27ರಂದು ಏರ್ಪಡಿಸಲು ಸಂಸದ ಆರ್‌.ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಕರೆಯಲಾಗಿದ್ದ ಪೂರ್ವಭಾ ಸಭೆಯಲ್ಲಿ ನಿರ್ಧರಿಸಲಾಯಿತು.

Advertisement

ನಗರದ ಜಿಪಂ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಆರಂಭದಲ್ಲೇ ಮಾತನಾ ಡಿದ ಸಂಸದ ಆರ್‌.ಧ್ರುವನಾರಾಯಣ, ಡಾ.ಬಿ.ಆರ್‌.ಅಂಬೇಡ್ಕರ್‌ ಜನ್ಮ ದಿನವನ್ನು ಉಪಚು ನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು ಎಲ್ಲರ ಅಭಿಪ್ರಾ ಯದಂತೆ ಮತ್ತೂಮ್ಮೆ ಅದ್ಧೂರಿಯಾಗಿ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅಗತ್ಯವಿರುವ ಸಲಹೆ ನೀಡುವಂತೆ ಸಂಘಸಂಸ್ಥೆ ಮುಖಂಡರಿಗೆ ಮನವಿ ಮಾಡಿದರು.

ದಲಿತ ಮುಖಂಡ ಸಿ.ಎಂ.ಕೃಷ್ಣಮೂರ್ತಿ ಮಾತನಾಡಿ, ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಸಂದರ್ಭದಲ್ಲಿ ಚುನಾವಣೆ ಸಹಜವಾಗಿ ಎದುರಾಗಿದೆ. ಆದರೆ ಅಂಬೇಡ್ಕರ್‌ ವಿಚಾರಧಾರೆ ಆದರ್ಶ ಹೋರಾಟದ ಮೌಲ್ಯಗಳನ್ನು ಜನರಿಗೆ ತಲುಪಿಸಬೇ ಕೆನ್ನುವುದು ನಮ್ಮ ಉದ್ದೇಶವಾಗಿದೆ. ಹೀಗಾಗಿ ಅಂಬೇಡ್ಕರ್‌ ಜಯಂತಿ ಎಂದಿನಂತೆ ಆಚರಿಸಬೇಕು ಎಂಬುದು ನಮ್ಮ ನಿಲುವು ಆಗಿದೆ. ಈ ವಿಷಯದಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ ಎಂದರು.

ಮುಖಂಡ ಅರಕಲವಾಡಿ ನಾಗೇಂದ್ರ  ಮಾತನಾಡಿ, ಎಂದಿನಂತೆ ಅಂಬೇಡ್ಕರ್‌ ಅವರ ವಿಚಾರಗಳನ್ನು ಪ್ರಸ್ತುತಪಡಿಸುವ ವಿಚಾರ ಸಂಕಿರಣಕ್ಕೆ ವಿಚಾರವಾದಿಗಳನ್ನು ಆಹ್ವಾನಿಸಿ ಆಯೋಜಿ ಸುವ ವಿಚಾರ ಸಂಕಿರಣಕ್ಕೂ ಹೆಚ್ಚಿನ ಜನರುಈ ಹಿಂದಿನಿಂದಲೂ ಬರುತ್ತಿದ್ದಾರೆ. ಈ ಬಾರಿಯೂ ವಿಚಾರಸಂಕಿರಣ ಏರ್ಪಡಿಸಲೇಬೇಕೆಂದರು. ಮತ್ತೋರ್ವ ಮುಖಂಡ  ಪರ್ವತರಾಜು  ಮಾತನಾಡಿ, ಎಲ್ಲ ಸಮುದಾಯಗಳ ಮುಖಂಡ ರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಮಾದರಿ ಕಾರ್ಯಕ್ರಮವಾಗಿ ರೂಪುಗೊಳಿಸಬೇಕಿದೆ ಎಂದು ಸಲಹೆ ಮಾಡಿದರು. 

ಪೇಟೆ  ಪ್ರ„ಮರಿ  ಶಾಲೆ ಆವರಣೆಲ್ಲಿ ಕಾರ್ಯಕ್ರಮ: ಎಲ್ಲರ ಅಭಿಪ್ರಾಯಗಳನ್ನು ಆಲಿಸಿದ ಧ್ರುವನಾರಾಯಣ, ಏ.28ರಂದು ನಗರದ ಪೇಟೆ ಪ್ರ„ಮರಿ ಶಾಲೆ ಆವರಣದಲ್ಲಿ ಎಲ್ಲ ತಾಲೂಕುಗಳ ಜನತೆಯೂ ಪಾಲ್ಗೊಳ್ಳಲು ಅವಕಾಶವಾಗುವಂತೆ ಜಿಲ್ಲಾ ಮಟ್ಟದಲ್ಲಿ ಡಾ.ಬಿ.ಆರ್‌.ಅಂಬೇಡ್ಕ ರ್‌ ಜನ್ಮ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗುವುದು. 

Advertisement

ಸಮಾರಂಭಕ್ಕೆ ಮೊದಲು ಅಂಬೇಡ್ಕರ್‌ ಭಾವಚಿತ್ರ ಮೆರವಣಿಗೆ  ಮಾಡಲಾ ಗುವುದು. ಏ.27ರಂದು ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದರು. ಮೆರವಣಿಗೆಗೆ ಹೆಚ್ಚಿನ ಕಲಾತಂಡಗಳನ್ನು ನಿಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದ ಸಂಸದ ಬೇರೆ ಬಗೆಯ ಕಲಾತಂಡಗಳ ಮಾಹಿತಿ ಇದ್ದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗಮನಕ್ಕೆ ತರಬಹುದೆಂದು ತಿಳಿಸಿದರು.

ಮೆರವಣಿಗೆ ಸಾಗುವ ಪ್ರಮುಖ ಬೀದಿರಸ್ತೆಗಳನ್ನು ದುರಸ್ತಿಪಡಿಸಬೇಕು. ಮೆರವಣಿಗೆ ಯು ಸುಗಮವಾಗಿ ಸಾಗಲು ಯಾವುದೇ ಅಡಚಣೆಯಾಗದಂತೆ ಸಿದ್ಧಪಡಿಸುವ ಹೊಣೆಗಾರಿಕೆ ನಗರಸಭೆ ಅಧಿಕಾರಿಗಳ ಮೇಲಿದೆ. ವಿಚಾರ ಸಂಕಿರಣ ಆಯೋಜನೆಯನ್ನು ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆ ಸಮಿತಿ ನಿರ್ವಹಿಸಬೇಕು. ಸಮಾ ರಂಭ ಅತ್ಯಂತ ಯಶಸ್ವಿಯಾಗಿ ನಡೆಸಲು ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖರಾಗಬೇಕು. ಜಯಂತಿ ಆಚರಣೆಗೆ ಸಂಘಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಧ್ರುವ ತಿಳಿಸಿದರು.

ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್‌.ಜಯಣ್ಣ, ಜಿಲ್ಲಾಧಿಕಾರಿ ಬಿ.ರಾಮು, ಜಿಪಂ ಸಿಇಒ ಡಾ.ಕೆ.ಹರೀಶ್‌ಕುಮಾರ್‌, ಎಸ್ಪಿ ಕುಲದೀಪ್‌ ಕುಮಾರ್‌ ಜೈನ್‌, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇ ಶಕ  ಕೆ.ಎಚ್‌.ಸತೀಶ್‌, ನಗರಸಭಾ ಸದಸ್ಯ ನಂಜುಂಡಸ್ವಾಮಿ, ಮುಖಂಡರಾದ ಕೆ.ಎಂ.ನಾಗರಾಜು, ಸಿ.ಕೆ.ಮಂಜುನಾಥ್‌, ಸಂಘಸೇನಾ, ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾಯಣ, ಸೋಮ ಶೇಖರ ಬಿಸಲ್ವಾಡಿ, ಆಲೂರು ನಾಗೇಂದ್ರ, ಮಾಜಿ ನಗರಸಭಾ ಸದಸ್ಯ ನಾಗರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next