Advertisement

ಕೊಬ್ಬರಿ ಧಾರಣೆ ಕುಸಿತ: ನೆರವಿಗೆ ಆಗ್ರಹ

11:32 PM Feb 18, 2020 | Lakshmi GovindaRaj |

ವಿಧಾನಸಭೆ: ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್‌ ಕೊಬ್ಬರಿಗೆ 9,920 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದು, ಮಾರು ಕಟ್ಟೆಯಲ್ಲಿ 10,300 ರೂ. ಧಾರಣೆಯಿದೆ. ವರ್ತಕರು ಕೊಬ್ಬರಿ ಧಾರಣೆ 9,920 ರೂ.ಗಿಂತ ಕಡಿಮೆಯಾಗದಂತೆ ಮಾರುಕಟ್ಟೆ ನಿಯಂತ್ರಿಸುತ್ತಿದ್ದು, ಬೆಳೆಗಾರರ ಸ್ಥಿತಿ ಬಗ್ಗೆ ನಮಗೂ ನೋವಿದೆ.

Advertisement

ಈ ಸಂಬಂಧ ಸಿಎಂ, ತೋಟಗಾರಿಕೆ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು. ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ ಶಾಸಕ ಶಿವಲಿಂಗೇ ಗೌಡ, ಅಂತರ್ಜಲ ಕುಸಿತದಿಂದ ತೆಂಗು ಬೆಳೆ ನಾಶವಾಗಿ ಸಮಸ್ಯೆಗೆ ಸಿಲುಕಿದ್ದಾರೆ.

ಸದ್ಯ ಬೆಳೆದ ಬೆಳೆ ಸಾಲಕ್ಕೆ ಹೋಗುತ್ತಿದ್ದು, ರೈತರಿಗೆ ಹಣ ಸಿಗದಂತಾಗಿದೆ. ಈ ಹಿಂದೆ ಪ್ರತಿ ಕ್ವಿಂಟಲ್‌ ಕೊಬ್ಬರಿ ಧಾರಣೆ 18,000 ರೂ. ಇತ್ತು. ಆದರೀಗ 8000 ರೂ.ನಿಂದ 10,000 ರೂ.ನಷ್ಟಿದೆ. ಕೂಡಲೇ ರಾಜ್ಯ ಸರ್ಕಾರ ತೆಂಗು ಬೆಳೆಗಾರರ ನೆರವಿಗೆ ಧಾವಿಸಬೇಕು. ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಫೆಡ್‌) ಮೂಲಕ ಕೊಬ್ಬರಿ ಖರೀದಿಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next